ಜ್ಞಾನವಾಪಿ ಮಸೀದಿಯ ವೀಡಿಯೊ ಸರ್ವೇ ಮಾಡಿದ ಅಧಿಕಾರಿಯನ್ನು ತೆಗೆದುಹಾಕಿದ ವಾರಣಾಸಿ ಕೋರ್ಟ್
ವಾರಣಾಸಿ: ಜ್ಞಾನವಾಪಿ ಮಸೀದಿಯ ವೀಡಿಯೋ ಸರ್ವೇ ಮಾಡಿದ ಬಳಿಕ ಅಲ್ಲಿ ʼಶಿವಲಿಂಗʼ ದೊರೆತಿದೆ ಎಂಬ ವಿಚಾರವೊಂದು ಮುನ್ನೆಲೆಗೆ ಬಂದಿತ್ತು. ಆ ಪ್ರದೇಶವನ್ನು ಸೀಲ್ ಮಾಡಲು ನ್ಯಾಯಾಲಯ ಆದೇಶಿಸಿತ್ತು. ಸದ್ಯ ಈ ಕುರಿತ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ಚರ್ಚೆಯಲ್ಲಿದೆ. ಈ ನಡುವೆ ಜ್ಞಾನವಾಪಿ ಮಸೀದಿಯ ವೀಡಿಯೊ ಸರ್ವೇ ಮಾಡಿದ ಅಧಿಕಾರಿಯನ್ನು ವಾರಣಾಸಿ ಕೋರ್ಟ್ ತೆಗೆದುಹಾಕಿದೆ ಎಂದು ತಿಳಿದು ಬಂದಿದೆ.
ಜ್ಞಾನವಾಪಿ ಮಸೀದಿಯ ವೀಡಿಯೋ ಸರ್ವೇ ಮಾಡಲು ವಾರಣಾಸಿ ಕೋರ್ಟ್ ಅಡ್ವೊಕೇಟ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾರನ್ನು ನೇಮಿಸಿತ್ತು. ಸದ್ಯ ಈ ನೇಮಕವನ್ನು ರದ್ದುಗೊಳಿಸಿದ್ದು, ಎರಡು ದಿನಗಳ ಒಳಗಡೆ ವರದಿ ನೀಡಲು ಸಮಿತಿಗೆ ಆದೇಶಿಸಿದೆ.
Next Story