‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತುಳು ಸಿನೆಮಾ ಉದ್ಘಾಟನೆ
ಉಡುಪಿ : ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಶುಕ್ರವಾರ ತೆರೆಕಂಡ ರಾಹುಲ್ ಅಮೀನ್ ನಿರ್ದೇಶನ ‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತುಳು ಸಿನೆಮಾವನ್ನು ಲಯನ್ಸ್ ಮಾಜಿ ಗವರ್ನರ್ ಸುರೇಶ್ ಪ್ರಭು ಉದ್ಘಾಟಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ವಿ.ಶೆಟ್ಟಿ, ವಕೀಲ ಸಂಕಪ್ಪ ಎ., ಉದ್ಯಮಿ ಅಶೋಕ್ ಶೆಟ್ಟಿ ಮುಂಬೈ, ನಟ ಸಂದೀಪ್ ಶೆಟ್ಟಿ, ಹಿರಿಯ ಛಾಯಾಚಿತ್ರಗ್ರಾಹಕ ನವೀನ್ ಬಲ್ಲಾಳ್, ಜೆಡಿಎಸ್ ಕಾಪು ಕ್ಷೇತ್ರ ಅಧ್ಯಕ್ಷ ಭರತ್ ಶೆಟ್ಟಿ, ಪ್ರಮುಖರಾದ ಉದಯ್ ರೈ, ಪ್ರಭಾಕರ್ ಶೆಟ್ಟಿಗಾರ್, ಹರೀಶ್ ಕೆಮ್ಮಣ್ಣು, ಕಲ್ಪನಾ ಥಿಯೇಟರ್ ಮ್ಯಾನೇಜರ್ ವಿ.ಎಸ್.ಹೊಳ್ಳ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ನಝೀರ್ ಪೊಲ್ಯ ಉಪಸ್ಥಿತರಿದ್ದರು.
ನಟ ಪ್ರಸನ್ನ ಶೆಟ್ಟಿ ಬೈಲೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸುದೇವ್ ರಾವ್ ವಂದಿಸಿದರು.
Next Story