ಇಂಡಿಯಾ ಗೇಟ್ನಲ್ಲಿದ್ದ ಹೆಲ್ಮೆಟ್, ರೈಫಲ್ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸ್ಥಳಾಂತರ
ಹೊಸದಿಲ್ಲಿ: ರಾಜಧಾನಿಯ ಇಂಡಿಯಾ ಗೇಟ್ನಲ್ಲಿರುವ ಅಮರ್ ಜವಾನ್ ಜ್ಯೋತಿಯ ಭಾಗವಾಗಿದ್ದ ಐತಿಹಾಸಿಕ ಹೆಲ್ಮೆಟ್ ಮತ್ತು ರೈಫಲ್ ಅನ್ನು ಶುಕ್ರವಾರ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸ್ಥಳಾಂತರಿಸಲಾಗಿದೆ. ಈ ಸ್ಮಾರಕವು ಅಮರ್ ಜವಾನ್ ಜ್ಯೋತಗಿಂತ ಒಂದು ಕಿಮೀಗೂ ಕಡಿಮೆ ದೂರದಲ್ಲಿದೆ. ಈ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ಉದ್ಘಾಟಿಸಿದ್ದರು.
ಅಮರ್ ಜವಾನ್ ಜ್ಯೋತಿಯನ್ನು 1972ರಲ್ಲಿ ಹೊತ್ತಿಸಿದ ನಂತರ ಮೊದಲ ಬಾರಿ ಅದನ್ನು ನಂದಿಸಿದ ನಾಲ್ಕು ತಿಂಗಳುಗಳ ನಂತರ ಮೇಲಿನ ಬೆಳವಣಿಗೆ ನಡೆದಿದೆ. ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗಿತ್ತು.
ಶುಕ್ರವಾರ ಇಂಡಿಯಾ ಗೇಟ್ನಲ್ಲಿದ್ದ ಹೆಲ್ಮೆಟ್ ಮತ್ತು ರೈಫಲ್ ಅನ್ನು ಯುದ್ಧ ಸ್ಮಾರಕದ ಪರಮ್ ಯೋಧ ಸ್ಥಳ್ಗೆ ಸ್ಥಳಾಂತರಿಸಿ ಪರಮ್ ವೀರ್ ಚಕ್ರ ಪ್ರಶಸ್ತಿ ವಿಜೇತರ ಪುತ್ಥಳಿಗಳ ನಡುವೆ ಸ್ಥಾಪಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸಮಾರಂಭದ ಅಂಗವಾಗಿ ಇಂಡಿಯಾ ಗೇಟ್ನಲ್ಲಿ ಅಂತಿಮ ಸೆಲ್ಯೂಟ್ ನೀಡಿ ಅಲ್ಲಿ ಹೂಗುಚ್ಛ ಇರಿಸಲಾಯಿತು. ನಂತರ ತಲೆಕೆಳಗಾದ ರೈಫಲ್ ಮತ್ತು ಹೆಲ್ಮೆಟ್ ಅನ್ನು ಸ್ಥಳಾಂತರಿಸಲಾಯಿತು,
ಈ ಸಂದರ್ಭ ವಾಯು ಸೇನಾ ಮುಖ್ಯಸ್ಥ ಬಿ ಆರ್ ಕೃಷ್ಣ ಮತ್ತಿತರ ಅಧಿಕಾರಿಗಳು ಹಾಜರಿದ್ದರು.