ಹೊಸ ರೂಪದೊಂದಿಗೆ ಸಾಣೂರಿನ ಸರಕಾರಿ ಪ್ರೌಢಶಾಲೆ ಆಕರ್ಷಣೆ
ಕಾರ್ಕಳ, ಜೂ.2: ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡ ಕಾರ್ಕಳದ ಸಾಣೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗವನ್ನು ಇತ್ತೀಚೆಗೆ ಬಣ್ಣ ಹಚ್ಚಿ ಸುಂದರಗೊಳಿಸುವ ಮೂಲಕ ಆಕರ್ಷಿತವನ್ನಾಗಿಸಿದೆ.
ಸ್ವಾಮಿ ವಿವೇಕಾನಂದರು, ಬಿ.ಆರ್.ಅಂಬೇಡ್ಕರ್, ಪುನೀತ್ ರಾಜಕುಮಾರ್, ಸರ್ ಎಂ.ವಿಶ್ವೇಶ್ವರಯ್ಯ, ಸಾಲುಮರದ ತಿಮ್ಮಕ್ಕ, ರತನ್ ಟಾಟಾ, ಭಗತ್ ಸಿಂಗ್, ಮದರ್ ಥೆರೆಸಾ, ಅಬ್ದುಲ್ ಕಲಾಂ, ಸುಭಾಸ್ ಚಂದ್ರ ಬೋಸ್ ಸೇರಿದಂತೆ ಹಲವು ಮಹಾನ್ ನಾಯಕರ ಚಿತ್ರಗಳನ್ನು ಶಾಲೆಯ ಗೋಡೆಗಳಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.
ಇದರ ಅಂಗವಾಗಿ ಶಾಲೆಯ ಮಕ್ಕಳಿಗೆ ಮನರಂಜನಾ ಕಾರ್ಯಕ್ರಮ ದೊಂದಿಗೆ ಎಸೆಸೆಲ್ಸಿ ಅಧಿಕ ಅಂಕಗಳಿಸಿದ ನಾಲ್ಕು ವಿದ್ಯಾರ್ಥಿಗಳನ್ನು ಸನ್ಮಾನಿಸ ಲಾಯಿತು. ಮೇಕ್ ಸಂಒನ್ ಸ್ಮೈಲ್ ಹೆಲಪಿಂಗ್ ಹ್ಯಾಂಡ್ ತಂಡ ಪ್ರತಿ ವರ್ಷ ಹಲವಾರು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ನವೀಕರಿಸುವ ಮೂಲಕ ಕನ್ನಡ ಶಾಲೆಗಳ ಅಭಿವೃದ್ಧಿ ಜೊತೆ ಕೈಜೋಡಿಸುತ್ತಿದೆ. ಈ ಮೂಲಕ ಕನ್ನಡ ಶಾಲೆಗಳ ಉಳಿವಿಗಾಗಿ ಈ ತಂಡ ಬಹಳಷ್ಟು ಶ್ರಮ ಪಡುತ್ತಿದೆ ಎಂದು ತಂಡದ ಪದಾಧಿಕಾರಿಗಳು ತಿಳಿಸಿದ್ದಾರೆ.