ದೇಶದಲ್ಲಿ ರಕ್ತದ ಕೊರತೆ ನೀಗಿಸಲು ರಕ್ತದಾನ ಅಗತ್ಯ: ಡಾ.ವೀಣಾ
ಉಡುಪಿ : ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರೆಡ್ಕ್ರಾಸ್ ಘಟಕ, ರಾಷ್ತ್ರಿಯ ಸೇವಾ ಯೋಜನಾ ಘಟಕಗಳ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಜೂ.೮ರಂದು ಜರಗಿತು.
ಮುಖ್ಯ ಅತಿಥಿಯಾಗಿ ಡಾ.ವೀಣಾ ಕುಮಾರಿ ಮಾತನಾಡಿ, ರಕ್ತವು ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಪ್ಲಾಸ್ಮಾ ಮತ್ತು ಇತರೆ ಖನಿಜಗಳಿಂದ ಮಾಡಲ್ಪಟ್ಟಿದೆ. ಭಾರತದಲ್ಲಿ ಐದು ಕೋಟಿ ಯೂನಿಟ್ನಷ್ಟು ರಕ್ತದ ಅವಶ್ಯಕತೆ ಇದೆ. ಆದರೆ ಪ್ರಸ್ತುತ ಕೇವಲ ೨.೫ ಕೋಟಿ ಯೂನಿಟ್ನಷ್ಟು ರಕ್ತ ಪೂರೈಕೆ ಯಾಗುತ್ತಿದೆ. ಉಳಿದ ಕೊರತೆಯನ್ನು ಕೇವಲ ರಕ್ತದಾನದಿಂದ ಮಾತ್ರ ಪೂರೈಸಲು ಸಾಧ್ಯ ಎಂದು ತಿಳಿಸಿದರು.
ಶಲ್ಯತಂತ್ರ ವಿಭಾಗದ ಮುಖ್ಯಸ್ಥ ರಜನೀಶ್ ವಿ.ಗಿರಿ ಅಧ್ಯಕ್ಷತೆ ವಹಿಸಿದ್ದರು. ಕಮ್ಯುನಿಟಿ ಸರ್ವಿಸ್ ಯೂಜನಾಧಿ ಕಾರಿ ಡಾ.ಎಸ್.ಆರ್.ಮೊಹರೆ ಸ್ವಾಗತಿಸಿ ದರು. ರೆಡ್ಕ್ರಾಸ್ ಘಟಕದ ಅಧ್ಯಕ್ಷ ಡಾ.ಮೊಹಮ್ಮದ್ ಫೈಸಲ್ ವಂದಿಸಿದರು. ಚೇತನ ಕಾರ್ಯಕ್ರಮ ನಿರೂಪಿಸಿದರು. ೧೫೦ಕ್ಕೂ ಅಧಿಕ ಜನ ರಕ್ತದಾನ ಶಿಬಿರ ದಲ್ಲಿ ಭಾಗವಹಿಸಿದರು. ಸುಮಾರು ೧೧೦ ಯುನಿಟ್ಟಗಳಿಗೂ ಅಧಿಕ ರಕ್ತವನ್ನು ಸಂಗ್ರಹಿಸಲಾಯಿತು.