ಭಾರತದಲ್ಲಿ ಮುಸ್ಲಿಂ, ಸಿಖ್ಖರನ್ನು ಕೊಲ್ಲುವುದನ್ನು ನಾನು ಬೆಂಬಲಿಸುತ್ತೇನೆ: ಹಿಂದುತ್ವವಾದಿ ರಾನ್ ಬ್ಯಾನರ್ಜಿ ವಿವಾದ
ಒಟ್ಟಾವಾ: ಈ ಹಿಂದೆ ಹಲವಾರು ಬಾರಿ ವಿವಾದಾತ್ಮಕ ಮತ್ತು ದ್ವೇಷಪೂರಿತ ಹೇಳಿಕೆಗಳ ಮೂಲಕ ಕುಖ್ಯಾತಿ ಪಡೆದಿದ್ದ ಹಾಗೂ ಬಂಧನಕ್ಕೊಳಗಾಗಿದ್ದ ಅನಿವಾಸಿ ಭಾರತೀಯ ರಾನಕ್ ಬ್ಯಾನರ್ಜಿ ಅಲಿಯಾಸ್ ರಾನ್ ಬ್ಯಾನರ್ಜಿ ಇದೀಗ ಭಾರತದ ಹಿಂದೂ ಮತ್ತು ಸಿಖ್ಖರ ವಿರುದ್ಧ ತನ್ನ ನಾಲಗೆ ಹರಿಬಿಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾನೆ. "ಭಾರತದಲ್ಲಿ ಸಿಖ್ಖರನ್ನು ಮತ್ತು ಮುಸ್ಲಿಮರನ್ನು ಕೊಲ್ಲುವುದನ್ನು ನಾನು ಬೆಂಬಲಿಸುತ್ತೇನೆ" ಎಂದು ಆತ ಹೇಳುವ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೋವನ್ನು ಉಪ್ಸಲಾ ಯುನಿವರ್ಸಿಟಿಯ ಪ್ರಾಧ್ಯಾಪಕರಾಗಿರುವ ಅಶೋಕ್ ಸ್ವೈನ್ ಟ್ವೀಟ್ ಮಾಡಿದ್ದಾರೆ. ವೀಡಿಯೋದಲ್ಲಿ, ಕೆನಡಾದ ರಸ್ತೆ ಬದಿಯಲ್ಲೊ ವ್ಯಕ್ತಿಯೋರ್ವರೊಂದಿಗೆ ಮಾತನಾಡುತ್ತಾ ರಾನ್ ಬ್ಯಾನರ್ಜಿ "ಹಿಂದುತ್ವ ಮಾತ್ರ ದಾರಿ. ನಾನೊಬ್ಬ ಕಟ್ಟಾ ಹಿಂದುತ್ವವಾದಿ. ಈ ದೇಶದಲ್ಲೂ, ಭಾರತದಲ್ಲೂ ಮೋದಿಯ ಆಡಳಿತವನ್ನು ನಾನು ಬಯಸುತ್ತೇನೆ. ಮೋದಿ ಮುಸ್ಲಿಂ ಭಯೋತ್ಪಾದಕರನ್ನು ಮತ್ತು ಸಿಖ್ ಭಯೋತ್ಪಾದಕರನ್ನು ಕೊಲ್ಲುತ್ತಿದ್ದಾರೆ. ಇದು ನಿಜಕ್ಕೂ ಅದ್ಭುತ. ಮುಸ್ಲಿಮರು ಅರ್ಥೈಸಬೇಕಾಗಿರುವುದು ಏನೆಂದರೆ, ಅವರು ನಮ್ಮ ದೇಶದಲ್ಲಿ ಬದುಕಬೇಕು ಎಂದಿದ್ದರೆ, ನಮ್ಮ ನಿಯಮಗಳನ್ನು ಅನುಸರಿಸಬೇಕು."
"ಒಂದು ವೇಳೆ ಅವರು ನಮ್ಮ ನಿಯಮಗಳನ್ನು ಅನುಸರಿಸದಿದ್ದಲ್ಲಿ ಅವರು ಪರಿಣಾಮ ಅನುಭವಿಸಲಿದ್ದಾರೆ. ನನಗೆ ಯಾವುದೇ ಮೂಲಭೂತವಾದಿ ಮುಸ್ಲಿಮರ ಮತ್ತು ಖಾಲಿಸ್ತಾನಿಗಳ ಮೇಲೆ ಸಹಿಷ್ಣುತೆಯಿಲ್ಲ. ನಾನು ಭಾರತದಲ್ಲಿ ಮುಸ್ಲಿಮರನ್ನು ಮತ್ತು ಸಿಖ್ಖರನ್ನು ಕೊಲ್ಲುವುದನ್ನು ಬೆಂಬಲಿಸುತ್ತೇನೆ. ಏಕೆಂದರೆ, ಅವರು ಸಾಯುವುದಕ್ಕೆ ಅರ್ಹರಾಗಿದ್ದಾರೆ" ಎಂದು ಆತ ಹೇಳಿದ್ದು ವೀಡಿಯೋದಲ್ಲಿ ಸೆರೆಯಾಗಿದೆ.
ಹಲವರು ಸಾಮಾಜಿಕ ತಾಣದಲ್ಲಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Hindu Supremacist leader Ron Banerjee, the Executive Director of Hindu Conference of Canada openly demanding killing of of Muslims and Sikhs in India, saying “they deserve to die”! pic.twitter.com/PqPM39cKTt
— Ashok Swain (@ashoswai) June 23, 2022