16 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸರಕಾರ 16 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಲಕ್ಷ್ಮಣ್ ನಿಂಬರಗಿ ಅವರನ್ನು ಬೆಂಗಳೂರು ನಗರ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ. ಹಾಸನ ಅಧೀಕ್ಷಕರಾಗಿರುವ ಆರ್. ಶ್ರೀನಿವಾಸ್ ಗೌಡ ಅವರನ್ನು ಕೇಂದ್ರ ವಿಭಾಗ ಡಿಸಿಪಿಯಾಗಿ ನೇಮಿಸಿ ವರ್ಗಾವಣೆ ಮಾಡಿದೆ.
ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿರುವ ಶಿವಾಂಶು ರಾಜಪೂತ್ ಅವರನ್ನು ಹುಮ್ನಾಬಾದ್ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಿದೆ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ವಿವರ :
ಶ್ರೀನಾಥ್ ಮಹಾದೇವ್ ಜೋಶಿ- ಎಸ್ಪಿ, ಲೋಕಾಯುಕ್ತ
ಕೆಂ.ಎಂ.ಶಾಂತರಾಜು- ಬೆಸ್ಕಾಂ
ಸಿ.ಕೆ.ಬಾಬಾ- ಆಗ್ನೇಯ ವಿಭಾಗ ಡಿಸಿಪಿ
ಸಂಜೀವ್ ಪಾಟೀಲ್- ಬೆಳಗಾವಿ, ಎಸ್ಪಿ
ಕಲಾ ಕೃಷ್ಣಸ್ವಾಮಿ- ಪೂರ್ವ ಸಂಚಾರಿ ವಿಭಾಗ ಡಿಸಿಪಿ
ಹರೀಶ್ ಪಾಂಡೇ- ಎಸ್ಪಿ, ಎಸಿಬಿ
ಲಕ್ಷ್ಮಣ್ ನಿಂಬರಗಿ- ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ
ನಾಗೇಶ್ ಡಿ.ಎಲ್. ಎಸ್ಪಿ, ಚಿಕ್ಕಬಳ್ಳಾಪುರ
ಆರ್. ಶ್ರೀನಿವಾಸ್ ಗೌಡ - ಕೇಂದ್ರ ವಿಭಾಗ ಡಿಸಿಪಿ
ಸಿ.ಕೆ.ಮಿಥುನ್ ಕುಮಾರ್ - ಎಸ್ಪಿ, ಸಿಐಡಿ
ಪಿ ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ
ಹರಿರಾಂ ಶಂಕರ್- ಎಸ್ಪಿ, ಹಾಸನ
ಜೈಪ್ರಕಾಶ್- ಎಸ್ಪಿ, ಬಾಗಲಕೋಟೆ
ಶೋಭಾರಾಣಿ - ಎಸ್ಪಿ, ಎಸಿಬಿ
ಶಿವಾಂಶು ರಾಜಪೂತ್- ಎಎಸ್ ಪಿ ಹುಮ್ನಾಬಾದ್ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.