ಉಡುಪಿ, ಆ.14: ಉಡುಪಿ ಲಕ್ಷ್ಮೀ ನಗರದ ಕ್ರೋಡಾಶ್ರಮ ನಿವಾಸಿ ಸುರೇಶ್ ಭಟ್ (87) ಇಂದು ಸ್ವಗೃಹದಲ್ಲಿ ನಿಧನರಾದರು.
ಇವರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ. ಇವರು ಮಣಿಪಾಲ ಕೆಎಂಸಿಯಲ್ಲಿ ಅಕೌಂಟ್ ಆಫೀಸ್ನಲ್ಲಿ ವೃತ್ತಿ ನಡೆಸಿ, ನಿವೃತ್ತಿ ಬಳಿಕ ನಯಂಪಳ್ಳಿ ಕಾಶೀ ಮಠದ ಹಾಗೂ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.