ಬಿಜೆಪಿ ಕೊಯಮತ್ತೂರು ಅಧ್ಯಕ್ಷ ಬಾಲಾಜಿ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆ ಪ್ರಯೋಗ
ಬಾಲಾಜಿ ಉತ್ತಮರಾಮಸ್ವಾಮಿ (Photo: Facebook)
ಚೆನ್ನೈ: ಸಮಾಜ ಸುಧಾರಕ ಪೆರಿಯಾರ್ ಇ.ವಿ. ರಾಮಸ್ವಾಮಿ ಹಾಗೂ ಡಿಎಂಕೆ ನೀಲಗಿರಿ ಸಂಸದ ಎ. ರಾಜಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಕೊಯಮತ್ತೂರು ಅಧ್ಯಕ್ಷ ಬಾಲಾಜಿ ಉತ್ತಮರಾಮಸ್ವಾಮಿ(BJP Coimbatore president Balaji Uthamaramasamy ) ಅವರನ್ನು ಬಂಧಿಸಿದ ಒಂದು ದಿನದ ಪೊಲೀಸರು ಗುರುವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು (SC/ST Act invoked against BJP Coimbatore president) ಪ್ರಯೋಗಿಸಿದ್ದಾರೆ.
ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3, 1 (ಆರ್) (ಉದ್ದೇಶಪೂರ್ವಕವಾಗಿ ಯಾವುದೇ ಸ್ಥಳದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರನ್ನು ಅವಮಾನಿಸುವ ಉದ್ದೇಶದಿಂದ ಬೆದರಿಸುವುದು) ಅನ್ನು ಪ್ರಥಮ ಮಾಹಿತಿಗೆ ಸೇರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೊಯಮತ್ತೂರಿನಲ್ಲಿ ಹಿಂದೂ ಮುನ್ನಾನಿಯವರು ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಉತ್ತಮರಾಮಸ್ವಾಮಿ ಅವರು ಮಾಡಿದ ಭಾಷಣಕ್ಕೆ ಕಾಯ್ದೆ ಅನ್ವಯಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೊಯಮತ್ತೂರಿನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಎಸ್ಸಿ/ಎಸ್ಟಿ ಕಾಯ್ದೆಯ ಹೆಚ್ಚುವರಿ ನಿಬಂಧನೆಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ಹಾಜರುಪಡಿಸಿದರು. ಅಲ್ಲಿ ಉತ್ತಮರಾಮಸ್ವಾಮಿ ಅವರ ವಕೀಲರು ಅವರಿಗೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದರು.