ಶಿರೂರು: ನೆರೆ ಸಂತ್ರಸ್ತರಿಗೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಪರಿಹಾರ ವಿತರಣೆ
ಮಂಗಳೂರು, ಸೆ.23: ಉಡುಪಿ ಜಿಲ್ಲೆಯ ಶಿರೂರಿನಲ್ಲಿ ಕಳೆದ ತಿಂಗಳು ಬಂದ ನೆರೆ ಹಾವಳಿಯಿಂದ ಸಂತ್ರಸ್ತರಾದವರಿಗೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.muಹಮ್ಮದ್ ಮಸೂದ್ ಅವರ ನಿರ್ದೇಶನದಂತೆ ಪರಿಹಾರವನ್ನು ವಿತರಿಸಲಾಯಿತು.
ಶಿರೂರಿಗೆ ಭೇಟಿ ನೀಡಿದ ಕಮಿಟಿಯ ಉಪಾಧ್ಯಕ್ಷರುಗಳಾದ ಹಾಜಿ ಸಿ.ಮಹಮೂದ್, ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ.ಎಸ್. ಇಮ್ತಿಯಾಝ್ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಸಿ.ಎಂ.ಹನೀಫ್ ಹಾಗೂ ಖಲೀಲ್ ಅಹ್ಮದ್ ಉಡುಪಿಯವರನ್ನು ಶಿರೂರಿನ ಇಸ್ಲಾಹಿ ತಂಝೀಮ್ ಅಧ್ಯಕ್ಷ ಬಹಾಹುದ್ದೀನ್ ನದ್ವಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಇಸ್ಲಾಹಿ ತಂಝೀಮ್ ಸದಸ್ಯರು ಹಾಗೂ ವಾಸಿಂ ಬಾಷಾ ಮೊದಲಾದವರು ಉಪಸ್ಥಿತರಿದ್ದರು.
Next Story