ಮಗಳ ಶವವನ್ನು ಬೈಕ್ ನಲ್ಲಿ 68 ಕಿ.ಮೀ.ದೂರ ಸಾಗಿಸಿದ ತೆಲಂಗಾಣದ ಬುಡಕಟ್ಟು ದಂಪತಿ
ಖಮ್ಮಾಮ್,ನ.7: ಕರುಳು ಹಿಂಡುವ ಘಟನೆಯೊಂದರಲ್ಲಿ ಬುಡಕಟ್ಟು ದಂಪತಿ ತಮ್ಮ ಮೂರು ವರ್ಷದ ಪುತ್ರಿಯ ಶವವನ್ನು ಅನಿವಾರ್ಯವಾಗಿ ಬೈಕ್ ನಲ್ಲಿ 68 ಕಿ.ಮೀ.ದೂರ ಸಾಗಿಸಿದ್ದಾರೆ.
ಇಲ್ಲಿಂದ 68 ಕಿ.ಮೀ.ದೂರದ ಎಂಕೂರು(Eight hundred) ಮಂಡಳ ವ್ಯಾಪ್ತಿಯ ಕೋಥಮೆಡಪಳ್ಳಿ (Kothamedapally)ಗ್ರಾಮದ ನಿವಾಸಿಗಳಾದ ವೆಟ್ಟಿ ಮಲ್ಲ (Malla)ಮತ್ತು ಆದಿ(Adi) ದಂಪತಿಯ ಪುತ್ರಿ ಸುಕ್ಕಿ ಜ್ವರ(Sicca fever) ಮತ್ತು ಅಪಸ್ಮಾರ (Epilepsy)ದಿಂದ ಬಳಲುತ್ತಿದ್ದಳು. ಆಕೆಯನ್ನು ಎಂಕೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸಲಹೆಯ ಮೇರೆಗೆ ಸೋಮವಾರ ಬೆಳಿಗ್ಗೆ ಖಮ್ಮಾಮ್ ಜಿಲ್ಲಾಸ್ಪತ್ರೆ(Khammam District Hospital)ಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಳು.
ಆಸ್ಪತ್ರೆಯ ಸಿಬ್ಬಂದಿಗಳು ಯಾವುದೇ ಕರುಣೆಯನ್ನು ತೋರಿಸಲಿಲ್ಲ ಮತ್ತು ಶವವನ್ನು ಸ್ವಗ್ರಾಮಕ್ಕೆ ಸಾಗಿಸಲು ಆ್ಯಂಬುಲನ್ಸ್(Ambulance) ಒದಗಿಸುವಲ್ಲಿ ವಿಫಲರಾಗಿದ್ದರು ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಬಾಡಿಗೆಯ ಆ್ಯಂಬುಲನ್ಸ್ ವ್ಯವಸ್ಥೆ ಮಾಡಲು ಹಣವಿಲ್ಲದೆ ಹತಾಶಗೊಂಡ ಅವರು ಬಳಿಕ ತನ್ನ ಬಳಿಯಿದ್ದ ನೂರು ರೂ.ಗಳಲ್ಲಿ ಗ್ರಾಮಕ್ಕೆ ಮರಳಿ ಗ್ರಾಮಸ್ಥರಿಂದ ನೆರವು ಯಾಚಿಸಿದ್ದರು. ಯುವಕನೋರ್ವ ತನ್ನ ಬೈಕ್ ಅನ್ನು ಅವರಿಗೆ ನೀಡಿದ್ದು, ದಂಪತಿ ಅದರಲ್ಲಿ ಮಗಳ ಶವವನ್ನು ಮನೆಗೆ ಸಾಗಿಸಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ಮತ್ತು ಸರಕಾರದ ಅಮಾನವೀಯ ವರ್ತನೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ರೀತಿಯ ಮತ್ತೊಂದು ಘಟನೆಯೂ ವರದಿಯಾಗಿದ್ದು, ಆ್ಯಂಬುಲನ್ಸ್ ಗಿ ಗೋಗರೆದರೂ ಅಧಿಕಾರಿಗಳು ಸ್ಪಂದಿಸದ್ದರಿಂದ ವ್ಯಕ್ತಿಯೋರ್ವ ತನ್ನ ಅಣ್ಣನ 14ರ ಹರೆಯದ ಮಗನ ಶವವನ್ನು ಅನಿವಾರ್ಯವಾಗಿ ಬೈಕ್ ನಲ್ಲಿ ಶವಾಗಾರಕ್ಕೆ ಸಾಗಿಸಿದ ಘಟನೆ ರವಿವಾರ ಆಂಧ್ರಪ್ರದೇಶದ ಮಚಲಿಪಟ್ಣಮ್ನಲ್ಲಿ ನಡೆದಿದೆ.
ಬಾಲಕ ನವೀನ ಶವವು ಮಚಲಿಪಟ್ಣಮ್ ಸಮೀಪದ ಪೆದಪಟ್ನಮ್ ಗ್ರಾಮದ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಬಾಲಕನ ಚಿಕ್ಕಪ್ಪ ಅಧಿಕಾರಿಗಳನ್ನು ಸಂಪರ್ಕಿಸಿ ಶವವನ್ನು ಶವಾಗಾರಕ್ಕೆ ಸಾಗಿಸಲು ಆ್ಯಂಬುಲನ್ಸ್ ಒದಗಿಸುವಂತೆ ಕೋರಿದ್ದ.
ಆದರೆ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಇದರಿಂದ ಹತಾಶನಾಗಿದ್ದ ಆತ ಗತ್ಯಂತರವಿಲ್ಲದೆ ಶವವನ್ನು ಬೈಕಿನಲ್ಲಿ ಶವಾಗಾರಕ್ಕೆ ಸಾಗಿಸಿದ್ದಾನೆ. ಮೃತ ಬಾಲಕ ಗುಡೂರು ಜಿಲ್ಲಾ ಪರಿಷದ್ ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದ.
ಅಧಿಕಾರಿಗಳು ಘಟನೆಗೆ ಈವರೆಗೂ ಪ್ರತಿಕ್ರಿಯಿಸಿಲ್ಲ.