ಪ್ರಧಾನಿಯಿಂದ ಕಾಶಿ ತಮಿಳ್ ಸಂಗಮಮ್ ಉದ್ಘಾಟನೆ
ವಾರಣಾಸಿ, ನ. 19: ತಮಿಳುನಾಡು ಹಾಗೂ ವಾರಣಾಸಿಯ ನಡುವಿನ ಹಳೆಯ ಕೊಂಡಿಗಳನ್ನು ಮರು ಶೋಧಿಸಲು, ಪುನರ್ ದೃಢೀಕರಿಸಲು ಹಾಗೂ ಅದರ ಸಂಭ್ರಮ ಆಚರಿಸಲು ತಿಂಗಳು ಪೂರ್ತಿ ನಡೆಯುವ ಕಾರ್ಯಕ್ರಮ ಕಾಶಿ ತಮಿಳು ಸಂಗಮಮ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.
ತಮಿಳುನಾಡಿನ ೨,೫೦೦ಕ್ಕೂ ಅಧಿಕ ಗಣ್ಯರು ವಾರಣಾಸಿಗೆ ಭೇಟಿ ನೀಡಿದರು. ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು ಹಾಗೂ ತಮ್ಮದೇ ಆದ ವ್ಯಾಪಾರ, ವೃತ್ತಿ, ಆಸಕ್ತಿಯ ಸ್ಥಳೀಯ ಜನರೊಂದಿಗೆ ಸಂವಹನ ನಡೆಸಿದರು.
ಇಲ್ಲಿ ಎರಡು ವಲಯದ ಕೈಮಗ್ಗ, ಕರಕುಶಲ, ಪುಸ್ತಕಗಳು, ಸಾಕ್ಷ್ಯಚಿತ್ರಗಳು, ತಿನಿಸು, ಕಲಾ ರೂಪ, ಚರಿತ್ರೆ, ಪ್ರವಾಸಿ ಸ್ಥಳಗಳ ವಿವರಗಳನ್ನು ಪ್ರದರ್ಶಿಸಲಾಗಿತ್ತು.
Next Story