ಕುಣಿಗಲ್ | ರಸ್ತೆ ಅಪಘಾತಕ್ಕೆ ಯುವಕ ಬಲಿ; ಇಬ್ಬರಿಗೆ ಗಾಯ
ತುಮಕೂರು, ನ.27: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ (Accident) ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರವಿವಾರ ಮುಂಜಾನೆ 3:3ರ ಸುಮಾರಿಗೆ ಕುಣಿಗಲ್ ಅಂಚೆಪಾಳ್ಯದ ಬಳಿ ಸಂಭವಿಸಿರುವುದು ವರದಿಯಾಗಿದೆ.
ಮೃತರನ್ನು ಬೆಂಗಳೂರು ನಿವಾಸಿ ನರಸಿಂಹ(29) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ನಾಯಂಡನಹಳ್ಳಿ ನಿವಾಸಿಗಳಾದ ವಿಜಯ್ ಹಾಗೂ ಮನೋಜ್ ಎಂಬವರು ಗಾಯಗೊಂಡಿದ್ದು, ಅವರನ್ನು ಕುಣಿಗಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೂವರು ಬೆಂಗಳೂರಿನಿಂದ ಕಾರಿನಲ್ಲಿ ಹೆಬ್ಬೂರಿನಲ್ಲಿರುವ ಚಿಕ್ಜಣ್ಣನ ದೇವಸ್ಥಾನಕ್ಕೆ ಹೊರಟಿದ್ದರು. ಕಾರು ಕುಣಿಗಲ್ ಅಂಚೆಪಾಳ್ಯದ ಬಳಿ ತಲುಪಿದಾಗ ಹಂಪ್ಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿತ್ತೆನ್ನಲಾಗಿದೆ.
ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರು: ವಿವಾದಕ್ಕೆ ಕಾರಣವಾಗಿದ್ದ ಬಸ್ ತಂಗುದಾಣದ ಗೋಪುರಗಳು ರಾತ್ರೋರಾತ್ರಿ ತೆರವು
Next Story