ಬಿಜೆಪಿ ಅಭ್ಯರ್ಥಿಯ ದಾಳಿಯಿಂದ ರಕ್ಷಿಸಿಕೊಳ್ಳಲು ಕಾಡಿನಲ್ಲಿ ರಾತ್ರಿ ಕಳೆದೆ: ಗುಜರಾತ್ ಕಾಂಗ್ರೆಸ್ ಶಾಸಕ
ಅಹಮದಾಬಾದ್: ಬಿಜೆಪಿ ಅಭ್ಯರ್ಥಿ ಲಾಡು ಪರ್ಘಿ ನನ್ನ ಮೇಲೆ ದಾಳಿ ನಡೆಸಿದ್ದು, ದಾಳಿಯಿಂದ ರಕ್ಷಿಸಿಕೊಳ್ಳಲು ಕಾಡಿನಲ್ಲಿ ರಾತ್ರಿ ಕಳೆದಿದ್ದೆ ಎಂದು ಕಾಂಗ್ರೆಸ್ ಶಾಸಕ ಕಾಂತಿ ಖರಾಡಿ ಸೋಮವಾರ ಬೆಳಗ್ಗೆ ಹೇಳಿದ್ದಾರೆ.
ರವಿವಾರ ಸಂಜೆ ಗುಜರಾತ್ನ ಕಾಂಗ್ರೆಸ್ ಶಾಸಕರೊಬ್ಬರು ನಾಪತ್ತೆಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಮಧ್ಯರಾತ್ರಿಯ ನಂತರ ಟ್ವೀಟ್ ಮಾಡಿದ್ದರು.
ಗುಜರಾತ್ ವಿಧಾನಸಭೆಗೆ 2ನೇ ಹಂತದ ಚುನಾವಣೆ ಆರಂಭವಾಗಲು ಕೆಲವೇ ಗಂಟೆ ಇರುವಾಗ ಕಾಂತಿ ಖರಾಡಿ ಈ ಆರೋಪ ಮಾಡಿದ್ದಾರೆ.
ಈ ಆರೋಪಕ್ಕೆ ಬಿಜೆಪಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗುಜರಾತ್ ವಿಧಾನಸಭೆಗೆ ಸೋಮವಾರ 93 ಸ್ಥಾನಗಳಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು ಈ ಪೈಕಿ ಗುಜರಾತ್ನ ಬನಸ್ಕಾಂತದ ದಾಂಟಾದಿಂದ ಕಾಂತಿ ಖರಾಡಿ ಮರು ಆಯ್ಕೆ ಬಯಸಿದ್ದಾರೆ.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಡು ಪರ್ಘಿ ವಿರುದ್ಧ ಖರಾಡಿ ಅವರು ಎಫ್ಐಆರ್ ದಾಖಲಿಸಿದ್ದಾರೆ.
"ನನ್ನ ಮತದಾರರ ಬಳಿ ಹೋಗುತ್ತಿದ್ದಾಗ ಬಿಜೆಪಿ ಅಭ್ಯರ್ಥಿ, ಆತನ ಸಹೋದರ ನನ್ನ ಮೇಲೆ ಕತ್ತಿಯಿಂದ ದಾಳಿಗೆ ಮುಂದಾದ ನಂತರ ನಾನು ತಪ್ಪಿಸಿಕೊಂಡಿದ್ದೆ ಹಾಗೂ ಗಂಟೆಗಳ ಕಾಲ ಕಾಡಿನಲ್ಲಿ ಅಡಗಿಕೊಂಡೆ. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದೆ'' ಎಂದೂ ಖರಾಡಿ ಹೇಳಿದ್ದಾರೆ.
"ರಾತ್ರಿ 9.30 ರ ಸುಮಾರಿಗೆ ಬಿಜೆಪಿ ಅಭ್ಯರ್ಥಿ ಹಾಗೂ ಅವರ 150 ಗೂಂಡಾಗಳು ನನ್ನ ಮೇಲೆ ಕತ್ತಿಗಳಿಂದ ದಾಳಿ ನಡೆಸಿದರು. ಅವರು ನನ್ನನ್ನು ಕೊಲ್ಲಲು ಬಂದಿದ್ದರು, ಆದ್ದರಿಂದ ನಾನು ಓಡಿ ಹೋಗಿ ಮೂರ್ನಾಲ್ಕು ಗಂಟೆಗಳ ಕಾಲ ಕಾಡಿನಲ್ಲಿ ಅಡಗಿಕೊಂಡಿದ್ದೇನೆ. ಮೂರು-ನಾಲ್ಕು ಗಂಟೆಗಳ ನಂತರ ಪೊಲೀಸರು ನನ್ನನ್ನು ಹುಡುಕಿದರು'' ಎಂದು ಖರಾಡಿ NDTV ಗೆ ತಿಳಿಸಿದರು.
कांग्रेस के आदिवासी नेता और दांता विधानसभा प्रत्याशी, श्री कांतिभाई खराडी पर BJP के गुंडों ने जानलेवा हमला किया और अब वो लापता हैं।
— Rahul Gandhi (@RahulGandhi) December 4, 2022
कांग्रेस ने EC के अतिरिक्त अर्धसैनिक बल की तैनाती की मांग की थी, मगर आयोग सोया रहा।
भाजपा सुन ले - न डरे हैं, न डरेंगे, डट कर लड़ेंगे। #DaroMat