ಸೈನಿಕರಿಗೆ ʼಒಂದು ಶ್ರೇಣಿ ಒಂದು ಪಿಂಚಣಿʼ ಪರಿಷ್ಕರಣೆಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ
ಹೊಸದಿಲ್ಲಿ: ಒಂದು ಶ್ರೇಣಿ-ಒಂದು ಪಿಂಚಣಿ (ಒಆರ್ಒಪಿ) ಯೋಜನೆಯ ಬಾಕಿ ಪಾವತಿಗೆ ಮಾರ್ಚ್ 15, 2023 ರವರೆಗೆ ಸಮಯವನ್ನು ವಿಸ್ತರಿಸುವಂತೆ ಕೋರಿ ಕೇಂದ್ರವು ಸುಪ್ರೀಂ ಕೋರ್ಟ್ ಮೊರೆ ಹೋದ ಒಂದು ವಾರದ ಬೆನ್ನಲ್ಲೇ, ಕೇಂದ್ರ ಸಚಿವ ಸಂಪುಟವು ಸೈನಿಕರಿಗೆ ಒಆರ್ಒಪಿ ಪರಿಷ್ಕರಣೆಗೆ ಅನುಮೋದನೆ ನೀಡಿದೆ.
ಸರ್ಕಾರವು ಡಿಸೆಂಬರ್ನಲ್ಲಿ ಎರಡನೇ ಬಾರಿಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಜೂನ್ನಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ಗೆ ಮೆಟ್ಟಿಲೇರಿತ್ತು. ಲೆಕ್ಕಾಚಾರ ಮತ್ತು ಪಾವತಿ ಮಾಡಲು ಮೂರು ತಿಂಗಳ ಕಾಲಾವಕಾಶ ಕೋರಿದ ನಂತರ ಬಾಕಿ ಪಾವತಿಸಲು ವಿಸ್ತರಣೆಯನ್ನು ಕೋರಲು ಎರಡನೇ ಬಾರಿ ಸುಪ್ರೀಂ ಮೆಟ್ಟಿಲೇರಿತ್ತು.
Next Story