Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಒಲಿದ ಸ್ವರಗಳು

ಒಲಿದ ಸ್ವರಗಳು

ಹಜ್‌ಮತ್ ಬಸ್ತಿಕ್ಕಾರ್ಹಜ್‌ಮತ್ ಬಸ್ತಿಕ್ಕಾರ್5 Jan 2023 10:31 PM IST
share

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರಾಗಿರುವ ಹಜ್‌ಮತ್ ಬಸ್ತಿಕ್ಕಾರ್ ವಿದ್ಯಾರ್ಥಿ ಕಾಲದಲ್ಲೇ ಪದ್ಯಗಳನ್ನು ಬರೆಯುತ್ತಾ ಬಂದವರು. ಇವರ ಹನಿ ಪದ್ಯಗಳು ಹಲವು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರನ್ನು ಸೆಳೆದಿವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಹನಿ ಪದ್ಯಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಹಜ್‌ಮತ್ ಬಸ್ತಿಕ್ಕಾರ್

ಹೆಡ್ ಫೋನ್‌ಗಳು
ಈಗೀಗ ಅನಿವಾರ್ಯ
ಏನೆಲ್ಲಾ ಕೇಳಲು...
ಎಷ್ಟೆಲ್ಲಾ ಕೇಳದೆ ಇರಲು..!!

ಭೂಮಿ
ಬೇರೆ ಯಾವುದೋ
ಲೋಕದ
ನರಕ ಇರಬಹುದು

ಮಳೆ...ಮಳೆ..!
ಕೆಲವರು ಬಾಲ್ಯವನ್ನು ನೆನೆದರು...
ಇನ್ನು ಕೆಲವರು
ಬರಿದೇ ನೆನೆದರು

ಹಗಲಿಡೀ
ಮುನಿಸಿಕೊಂಡು
ದೂರಾಗಿ..
ರಾತ್ರಿ
ತಬ್ಬಿ ಮಲಗುವ
ರೆಪ್ಪೆಗಳು..!!

ದಿನಕ್ಕೆ
ಎರಡು ಸಲ
ಬಿಗಿ ಹಿಡಿದು ಮುತ್ತಿಡುವ
ಬ್ರಶ್ಶು ಕೂಡಾ
ಸಮಯ, ಸಂಧಿ ನೋಡಿ
ಗುದ್ದಿ ನೋಯಿಸುವ ಜಗತ್ತಿನಲ್ಲಿ
ನಿಮ್ಮದು
ಇರಿಯುವ
ಮನುಷ್ಯರ ಕುರಿತು
ಅಹವಾಲು..!!

ಅಪ್ಪನದು
ಅಳು ಬಾರದ

ಕಲ್ಲು ಮನಸು ಮಕ್ಕಳು, ಮಡದಿಯ
ಆರೋಪ...

ಹೌದು...

ವಿದೂಷಕನ ಮುಖವಾಡಕ್ಕೆ...
ಅಳುವಿರುವುದಿಲ್ಲ..!!

ಈಗೀಗ...
ನಾಲಿಗೆಗಿಂತಲೂ
ವಾಚಾಳಿಗಳಾಗಿವೆ
ಬೆರಳುಗಳು

ಸುದೈವವಶಾತ್...
ನಾಳೆಯೆನ್ನುವುದೊಂದಿದೆ
ಇಲ್ಲದಿದ್ದರೆ,
ಇಂದೇ ಒಳ್ಳೆಯವನಾಗಬೇಕಾದ
ಅನಿವಾರ್ಯವಿತ್ತು

ಅವಳೊಂದು
ಕರೆ ಮಾಡಿದ್ದಿದ್ದರೆ...
ತೆಗೆಯದೆ ಇದ್ದು...
ಪ್ರತೀಕಾರ ತೀರಿಸಬಹುದಿತ್ತು..!!

‘ಮರಗಳು’
ಕವಿತೆ ಬರೆ ಬರೆದು
ಹರಿದೆಸೆದ
ಚಿಂದಿ ಕಾಗದಗಳು...
ಅದೋ... ತರಗೆಲೆಗಳು..!

ತೆರೆದೇ ಇದ್ದ
ಗೂಡೊಳಗೆ
ಮರಳಿ ಬರುವ ಗಿಳಿಗಳ
ಮಾನಸಿಕ ದಾಸ್ಯತೆಗೆ...
ಜಗತ್ತು
ವಿಧೇಯತೆಯೆಂದು
ಲಾವಣಿ ಹಾಡುತ್ತಲೇ ಇದೆ

ಹಿಂದೆಲ್ಲಾ ನಮ್ಮ ಬಾಲ್ಯದಲ್ಲಿ....
ಒಂದೊಂದು ಪುಸ್ತಕಗಳಲ್ಲೂ
ಅಡಗಿ ಕೂತ
ಕಾಗದದ ದೋಣಿಗಳಿದ್ದವು
ಮರಿ ಇಡಲು
ಕಳ್ಳಬಸಿರಿನ ನವಿಲ ಗರಿಗಳಿದ್ದವು..!!

ಸ್ವಾತಂತ್ರದ ದಿನ
ದೇಶದುದ್ದಕ್ಕೂ
ಧ್ವಜಸ್ತಂಭಕ್ಕೆ
ಕಟ್ಟಿಹಾಕಲ್ಪಟ್ಟ ಸ್ಥಿತಿಯಲ್ಲಿ

ಆಶೆಗಣ್ಣಿನ ಧ್ವಜಗಳು..!!

ನೀನೀಗ
ದೊಡ್ಡವನಾದೆ ಕಣೋ..

ಒಬ್ಬನೇ ಹೋಗಿ ಬಾ ಅಂಗಡಿಗೆ...
....ಹಾಲಿಗೆ

ನೀನೀಗ
ದೊಡ್ಡವಳಾದೆ ಕಣೇ..
ಒಬ್ಬಳೇ
ಹೋಗಬೇಡ ಅಂಗಡಿಗೆ
ಸ್ವಲ್ಪ ಲಗಾಮು ಇರಲಿ
ಕಾಲಿಗೆ..!!

share
ಹಜ್‌ಮತ್ ಬಸ್ತಿಕ್ಕಾರ್
ಹಜ್‌ಮತ್ ಬಸ್ತಿಕ್ಕಾರ್
Next Story
X