Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಯುಎಇ-ಇಂಡಿಯ ಬಿಝ್ ನೆಸ್ ಕೌನ್ಸಿಲ್ ನ...

ಯುಎಇ-ಇಂಡಿಯ ಬಿಝ್ ನೆಸ್ ಕೌನ್ಸಿಲ್ ನ ಯುಎಇ ಘಟಕ ಸ್ಥಾಪನೆ

UIBC-UC ಅಧ್ಯಕ್ಷರಾಗಿ ಫೈಝಲ್ ಕೊಟ್ಟಿಕೊಲ್ಲನ್ ನೇಮಕ

18 Feb 2023 10:22 PM IST
share
ಯುಎಇ-ಇಂಡಿಯ ಬಿಝ್ ನೆಸ್ ಕೌನ್ಸಿಲ್ ನ ಯುಎಇ ಘಟಕ ಸ್ಥಾಪನೆ
UIBC-UC ಅಧ್ಯಕ್ಷರಾಗಿ ಫೈಝಲ್ ಕೊಟ್ಟಿಕೊಲ್ಲನ್ ನೇಮಕ

ದುಬೈ: ಭಾರತ ಮತ್ತು ಯುಎಇಗಳಲ್ಲಿರುವ ಮಹತ್ವದ ಉದ್ಯಮಗಳ ನಡುವೆ ಸಹಕಾರ ಏರ್ಪಡಿಸುವ ಉದ್ದೇಶದ ಯುಎಇ-ಇಂಡಿಯ ಬಿಝ್ನೆಸ್ ಕೌನ್ಸಿಲ್ ನ ಯುಎಇ ಘಟಕವನ್ನು (UIBC-UC) ಇತ್ತೀಚೆಗೆ ಸ್ಥಾಪಿಸಲಾಗಿದೆ. ಹೂಡಿಕೆಗಳು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೌನ್ಸಿಲ್ ಕೆಲಸ ಮಾಡುತ್ತಿದೆ.

ಭಾರತ ಮತ್ತು ಯುಎಇ ದೇಶಗಳು ಸಹಿ ಹಾಕಿರುವ ಸಮಗ್ರ ಆರ್ಥಿಕ ಭಾಗೀದಾರಿಕೆ ಒಪ್ಪಂದ (ಕಾಂಪ್ರಿಹೆನ್ಸಿವ್ ಎಕನಾಮಿಕ್ ಪಾರ್ಟ್ನರ್ಶಿಪ್ ಅಗ್ರೀಮೆಂಟ್- ಸೆಪ)ದ ಮೊದಲ ವಾರ್ಷಿಕ ದಿನದಂದು ಈ ಘಟಕದ ಸ್ಥಾಪನೆಯಾಗಿರುವುದು ಗಮನಾರ್ಹವಾಗಿದೆ.

ದುಬೈಯಲ್ಲಿ ಇತ್ತೀಚೆಗೆ ಕೌನ್ಸಿಲ್ ನ ಯುಎಇ ಘಟಕ (ಯುಐಬಿಸಿ- ಯುಸಿ)ವನ್ನು ಯುಎಇಯ ವಿದೇಶ ವ್ಯಾಪಾರ ಖಾತೆಯ ಸಹಾಯಕ ಸಚಿವ ಡಾ. ತಾನಿ ಬಿನ್ ಅಹ್ಮದ್ ಅಲ್ ಝೆಯೂದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯುಎಇಗೆ ಭಾರತದ ರಾಯಭಾರಿ ಸಂಜಯ್ ಸುಧೀರ್, ದುಬೈಯಲ್ಲಿರುವ ಭಾರತೀಯ ಕೌನ್ಸುಲ್ ಜನರಲ್ ಡಾ. ಅಮನ್ ಪುರಿ ಮತ್ತು ಯುಐಬಿಸಿ- ಯುಸಿಯ ಸ್ಥಾಪಕ ಸದಸ್ಯರು ಉಪಸ್ಥಿತರಿದ್ದರು.

‘‘ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಉಭಯ ದೇಶಗಳ ನಡುವಿನ ಹೂಡಿಕೆ ಮತ್ತು ವ್ಯಾಪಾರ ಕಾರಿಡಾರ್ ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಉಭಯ ದೇಶಗಳ ಉದ್ಯಮಗಳ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ನಾವು ಬಯಸಿದ್ದೇವೆ. ಇನ್ನಷ್ಟು ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ಹೇಗೆ ಸೃಷ್ಟಿಸಬಹುದು ಎಂಬ ಬಗ್ಗೆ ಅವರು ವಿಚಾರ ವಿನಿಮಯ ಮಾಡುತ್ತಾರೆ’’ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಸಂಜಯ್ ಸುಧೀರ್ ಹೇಳಿದರು.

(ಫೈಝಲ್ ಕೊಟ್ಟಿಕೊಲ್ಲನ್)

ಕೌನ್ಸಿಲ್ ನ ಮುಖ್ಯ ಉದ್ದೇಶ ವಿಶ್ವಾಸ ನಿರ್ಮಾಣವಾಗಿದೆ ಎಂದು ಕೌನ್ಸಿಲ್ ನ ಯುಇಎ ಘಟಕದ ಅಧ್ಯಕ್ಷ ಫೈಝಲ್ ಕೊಟ್ಟಿಕೊಲ್ಲನ್ ಹೇಳಿದರು. ‘‘ಹಿಂದೆ, ಯುಎಇಯ ಹಲವಾರು ಕಂಪೆನಿಗಳು, ಭಾರತದಲ್ಲಿ ಹೂಡಿಕೆಯ ವಿಚಾರದಲ್ಲಿ ಅಪಕ್ವ ನಿರ್ಧಾರಗಳನ್ನು ತೆಗೆದುಕೊಂಡಿವೆ. ಯಾಕೆಂದರೆ ದೊಡ್ಡ ಮೊತ್ತದ ಹಣವನ್ನು ಹೂಡುವ ಧೈರ್ಯ ಅವುಗಳಲ್ಲಿರಲಿಲ್ಲ’’ ಎಂದು ಅವರು ಹೇಳಿದರು. ‘‘ಈಗ ನಾವು ಸೇತುವೆಯಾಗಿ ಕೆಲಸ ಮಾಡುತ್ತೇವೆ. ವಿಶ್ವಾಸವು ಯಾವುದೇ ವ್ಯಾಪಾರದ ತಳಹದಿಯಾಗಿದೆ. ವಿಶ್ವಾಸ ಹುಟ್ಟಿದಾಗ ಎಲ್ಲವೂ ಸುಗಮವಾಗುತ್ತದೆ’’ ಎಂದರು.

"ಈ ಕೌನ್ಸಿಲ್ ಸಂದರ್ಭೋಚಿತವಾಗಿದೆ. ಕೋವಿಡ್ ನಂತರ ಯುಎಇ ವಿಶ್ವದ ಕೇಂದ್ರವಾಗಿದೆ" ಎಂದು ಕೆಇಎಫ್ ಹೋಲ್ಡಿಂಗ್ಸ್‌ನ ಅಧ್ಯಕ್ಷರೂ ಆಗಿರುವ ಫೈಝಲ್ ಹೇಳಿದರು.

ಯುಎಇ-ಇಂಡಿಯ ಬಿಝ್ನೆಸ್ ಕೌನ್ಸಿಲ್ ನ ಯುಎಇ ಘಟಕದ ಯುಎಇ ವಿಭಾಗದ ಸ್ಥಾಪಕ ಸದಸ್ಯರು: ಮುಬದಲ, ವಿಝ್ ಫೈನಾನ್ಶಿಯಲ್, ಡಿಪಿ ವರ್ಲ್ಡ್, ಎಮಾರ್, ಎಮಿರೇಟ್ಸ್ ಏರ್ಲೈನ್ ಮತ್ತು ಎಮಿರೇಟ್ಸ್ ಎನ್ಬಿಡಿ.

ಭಾರತೀಯ ವಿಭಾಗದ ಸ್ಥಾಪಕ ಸದಸ್ಯರು: ಟಾಟಾ, ರಿಲಯನ್ಸ್, ಅದಾನಿ, ಓಲಾ, ಝಿರೋದಾ, ಉಡಾನ್, ಈಸಿ ಟ್ರಿಪ್, ಕೆಇಎಫ್ ಹೋಲ್ಡಿಂಗ್ಸ್, ಬೂಮರ್ಕ್ ಕಾರ್ಪೊರೇಶನ್, ಅಪಾರೆಲ್ ಗ್ರೂಪ್, ಎಎಫ್ಎಸ್ ಮತ್ತು ಲುಲು ಫೈನಾನ್ಶಿಯಲ್.

ಡಿಪಿ ವರ್ಲ್ಡ್ ಸಿಇಒ ಮತ್ತು ಆಡಳಿತ ನಿರ್ದೇಶಕ (ಭಾರತೀಯ ಉಪಖಂಡ) ರಿಝ್ವಾನ್ ಸೂಮರ್ ಕೌನ್ಸಿಲ್ ನ ಯುಎಇ ಘಟಕದ ಸಹ-ಅಧ್ಯಕ್ಷರಾಗಿರುವರು. ಕೌನ್ಸಿಲ್ ನ ಭಾರತೀಯ ಘಟಕದ ಅಧ್ಯಕ್ಷರಾಗಿರುವ ಶರಫುದ್ದೀನ್ ಶರಾಫ್ ಯುಎಇ ಘಟಕದಲ್ಲಿ ಉಪಾಧ್ಯಕ್ಷ ಹುದ್ದೆಯನ್ನೂ ನಿಭಾಯಿಸಲಿದ್ದಾರೆ.

ಯುಎಇ ಘಟಕದ ಕಚೇರಿಯು ಅಬುಧಾಬಿಯಲ್ಲಿರುತ್ತದೆ. ಕೌನ್ಸಿಲ್ ನ ಭಾರತೀಯ ಘಟಕವನ್ನು 2015ರಲ್ಲಿ ಹೊಸದಿಲ್ಲಿಯಲ್ಲಿ ಸ್ಥಾಪಿಸಲಾಗಿತ್ತು.

share
Next Story
X