Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ರಸ್ತೆಗಳಿಗೆ ನಟರ ಹೆಸರು: 'ಅಪ್ಪನನ್ನು...

ರಸ್ತೆಗಳಿಗೆ ನಟರ ಹೆಸರು: 'ಅಪ್ಪನನ್ನು ಮರೆತಿರುವುದು ಸಣ್ಣತನ‌' ಎಂದ ವಿಜೇತಾ ಅನಂತಕುಮಾರ್

ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ ಎಂದ ದಿವಂಗತ ಬಿಜೆಪಿ ನಾಯಕನ ಪುತ್ರಿ

28 March 2023 7:11 PM IST
share
ರಸ್ತೆಗಳಿಗೆ ನಟರ ಹೆಸರು: ಅಪ್ಪನನ್ನು ಮರೆತಿರುವುದು ಸಣ್ಣತನ‌ ಎಂದ ವಿಜೇತಾ ಅನಂತಕುಮಾರ್
ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ ಎಂದ ದಿವಂಗತ ಬಿಜೆಪಿ ನಾಯಕನ ಪುತ್ರಿ

ಬೆಂಗಳೂರು: ರಾಜ್ಯ ರಾಜಧಾನಿಯ ಪ್ರಮುಖ ರಸ್ತೆಗಳಿಗೆ ನಟರ ಹೆಸರುಗಳನ್ನು ಮರುನಾಮಕರಣ ಮಾಡುತ್ತಿರುವ ಬೆನ್ನಲ್ಲೇ, ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ್‌ ಕುಮಾರ್‌ ಪುತ್ರಿ ವಿಜೇತಾ ಅನಂತ್‌ ಕುಮಾರ್‌ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. 

ತನ್ನ ಕೊನೆ ಉಸಿರುವವರೆಗೆ ಪಕ್ಷವನ್ನು ಕಟ್ಟಿ ಬೆಳೆಸಿದ ನನ್ನ ಅಪ್ಪನನ್ನು ಮರೆತಿರುವ ಬಿಜೆಪಿಗೆ ಆತ್ಮಾವಲೋಕನ ಅಗತ್ಯ ಎಂದು ವಿಜೇತಾ ಬಿಜೆಪಿಯನ್ನು ಟೀಕಿಸಿದ್ದಾರೆ. 

“ಅಪ್ಪ 1987ರಲ್ಲಿ ಅಧಿಕೃತವಾಗಿ ಬಿಜೆಪಿಯನ್ನು ಸೇರಿದರು, ತಮ್ಮ ಕೊನೆಯ ಉಸಿರು ಇರುವವರೆಗೂ ಬಿಜೆಪಿಗಾಗಿ ದುಡಿದರು. ಉದ್ಘಾಟನಾ ಕಾರ್ಯಕ್ರಮಗಳು, ರಸ್ತೆಗಳು, ರೈಲು ಮಾರ್ಗಗಳಲ್ಲಿ ಅವರ ಹೆಸರಿಡುವ ಮೂಲಕ ಅವರ ಕೊಡುಗೆಗಳನ್ನು ಗುರುತಿಸದಿರುವುದು (ಪಕ್ಷದ) ಕ್ಷುಲ್ಲಕ ನಡೆಯಾಗಿದೆ. ಅವರು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಮರೆಯುತ್ತಿರುವ ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ ಇದೆ” ಎಂದು ವಿಜೇತಾ ಅನಂತಕುಮಾರ್ ಟ್ವೀಟ್‌ ಮಾಡಿದ್ದಾರೆ.

ವಿಜೇತಾ ದಿನ ಪತ್ರಿಕೆಯೊಂದರ ವರದಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಆ ವರದಿಯಲ್ಲಿ ಬೆಂಗಳೂರಿನ ರಸ್ತೆಗಳಿಗೆ ಪುನೀತ್‌ ರಾಜ್‌ಕುಮಾರ್‌, ಅಂಬರೀಷ್‌ ಮತ್ತು ವಜ್ರಮುನಿಯವರ ಹೆಸರು ನಾಮಕರಣ ಮಾಡಿದ ಬಗ್ಗೆ ಉಲ್ಲೇಖಿಸಲಾಗಿದೆ. ಅನಂತಕುಮಾರ್‌ ರ ಹೆಸರನ್ನು ಸಣ್ಣ ರಸ್ತೆಗೆ ಇಡಲಾಗಿದೆ ಎಂಬ ಆಕ್ಷೇಪಗಳೂ ಆ ವರದಿಯಲ್ಲಿ ಇವೆ. 

ವಿಜೇತಾ ಟ್ವೀಟ್‌ ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಅನಂತಕುಮಾರ್ ಅವರು ಬಲಾಢ್ಯ ಜಾತಿಗೆ ಸೇರಿದವರಾಗಿದ್ದರೆ ಅವರ ಹೆಸರನ್ನೂ ಬಿಜೆಪಿ ನೆನಪಿಸುತ್ತಿತ್ತು ಎಂದು ಟ್ವಿಟರ್‌ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಇನ್ನು ಕೆಲವರು ಕನ್ನಡಿಗ ನಟರ ಹೆಸರನ್ನು ಎಳೆದು ತಂದಿರುವುದನ್ನು ಪ್ರಶ್ನಿಸಿದ್ದು,  ಯಾರ್ಯಾರೋ ಗೊತ್ತಿಲ್ಲದೇ ಇರುವವರ ಹೆಸರು ಇಡಬೇಕಾದರೆ ಏನು ತೊಂದ್ರೆ ಇಲ್ಲ ಕನ್ನಡಿಗರ ಹೆಸರು ಇಡಬೇಕಂದ್ರೆ ಕಷ್ಟ ಅಲ್ವಾ ಎಂದು ಪ್ರತಿಕ್ರಿಯಿಸಿದ್ದಾರೆ.

Appa formally joined BJP in 1987 and worked for it till his last breath.

Not acknowledging his contributions by naming him in inaugural programs, roads, rail lines is trivial. He is alive in the hearts of lakhs of people.

The party that's forgetting him requires self reflection pic.twitter.com/JcPMqHOSPO

— Vijeta AnanthKumar (@vijeta_at) March 28, 2023

Unfortunately he doesn't belong to the most influential caste nor do has created a cult which could turn into votes. But party should remember there is still no replacement it has found who can bridge KA and Delhi like AK did, he took everyone into confidence. It's a void always

— Rohith Simha (@rohith_simha) March 28, 2023

ಸಾವರ್ಕರ್, ಗುಳಿಗೆಹಾಕರ್ ಅಂತಾ ಸಾವಿರಾರು ಹೆಸರಿವೆ, ಅವು ಬಿಟ್ಟು ನಿಮ್ಗೆ ಅಪ್ಪು/ಅಂಬಿ ಅವ್ರ ಫೋಟೋಗಳೇ ಕಾಣುತ್ತಾ ಇವೆ.

ಯಾಕೇ ಕನ್ನಡಿಗ ಅನಂತ್ ಕುಮಾರ್ ಹೆಸ್ರು ಇಲ್ಲ ಅನ್ನೋದಕ್ಕೆ ಕಾರಣ ನಿಮ್ಮಲ್ಲೇ ಇದೆ. ಅನಂತ್ ಕುಮಾರ್ ಹೆಸ್ರು ಇಟ್ಟಿಲ್ಲಿದಕ್ಕೆ ಕಾರಣ ನಿಮ್ ಮನಸ್ತಿತಿ.

ಉತ್ತರ ಪ್ರಶ್ನೆಯಲ್ಲಿಯೆ ಇದೆ

— InSane Joe (@Rakshaka007) March 28, 2023

ಅನಂತ್ ಕುಮಾರ್ ಅವರು ಕರ್ನಾಟಕದ ಪರ ಡೆಲ್ಲಿಯ ಅಧಿಕಾರವಲಯದಲ್ಲಿ ಲಾಬಿ ಮಾಡಿತ್ತಿದ್ದ ಒಬ್ಬ ಸಂಸದರಾಗಿ ಇರುತ್ತಿದ್ದರು ಎಂದು ಪಕ್ಷಾತೀತವಾಗಿ ಅವರು ತೀರಿಕೊಂಡಾಗ ರಾಜಕಾರಣಿಗಳು ನುಡಿದ್ದಿದ್ದರು.ಅವರು ತೀರಿಕೊಂಡ ನಾಲ್ಕು ವರ್ಷಗಳಲ್ಲಿ ಬಿಜೆಪಿಯ ಪೋಸ್ಟರ್ ಗಳಿಂದಲೂ ಮರೆಯಾಗಿದ್ದಾರೆ.ಇದು ಉದ್ದೇಶಪೂರ್ವಕ ಮರೆವೂ ಇರಬಹುದು https://t.co/g8AJ1QdvA1

— ಅಭಿಷೇಕ್ | Abhishek (@gundigre) March 28, 2023

ಶಿವಾಜಿ ಸಾವರ್ಕರ್ ಯಾರ್ಯಾರೋ ಗೊತ್ತಿಲ್ದೆ ಇರೋ ಮಹಶಮನ ದೀನದಯಾಳ್ ಹೆಸರು ಇಡಬೇಕಾದರೆ ಏನು ತೊಂದ್ರೆ ಇಲ್ಲ ಕನ್ನಡಿಗರ ಹೆಸರು ಇಡಬೇಕಂದ್ರೆ ಕಷ್ಟ ಅಲ್ವಾ?? ಇದನ್ನ @BJP4Karnataka ಹೇಳಬೇಕು, ನಿಮ್ಮದೇ ಸರ್ಕಾರ ಅಧಿಕಾರದಲ್ಲಿ ಇದ್ದು ಇಂತ ಪ್ರಶ್ನೆ ಕೇಳೋದು ಎಸ್ಟು ಮೂರ್ಖತನ.

— ಯಶವಂತ | Yashwanth (@Yashu_ts) March 28, 2023
share
Next Story
X