Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈ: ಅಗ್ನಿ ದುರಂತದ ವೇಳೆ...

ದುಬೈ: ಅಗ್ನಿ ದುರಂತದ ವೇಳೆ ನೆರೆಹೊರೆಯವರಿಗೆ ಇಫ್ತಾರ್‌ ಕೂಟ ಸಿದ್ಧಪಡಿಸುತ್ತಿದ್ದ ಭಾರತೀಯ ಮೂಲದ ದಂಪತಿ

ರಿಜೀಶ್ ಕಲಂಙಾಡನ್‌, ಪತ್ನಿ ಸಹಿತ 16 ಮಂದಿ ಮೃತಪಟ್ಟ ಪ್ರಕರಣ

17 April 2023 11:59 AM IST
share
ದುಬೈ: ಅಗ್ನಿ ದುರಂತದ ವೇಳೆ ನೆರೆಹೊರೆಯವರಿಗೆ ಇಫ್ತಾರ್‌ ಕೂಟ ಸಿದ್ಧಪಡಿಸುತ್ತಿದ್ದ ಭಾರತೀಯ ಮೂಲದ ದಂಪತಿ
ರಿಜೀಶ್ ಕಲಂಙಾಡನ್‌, ಪತ್ನಿ ಸಹಿತ 16 ಮಂದಿ ಮೃತಪಟ್ಟ ಪ್ರಕರಣ

ದುಬೈ: ಇಲ್ಲಿನ ಅಲ್‌ ರಸ್‌ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಮೃತಪಟ್ಟ 16 ಮಂದಿಯಲ್ಲಿ ಸೇರಿದ್ದ ಭಾರತೀಯ ಮೂಲದ ದಂಪತಿ ರಿಜೀಶ್ ಕಲಂಙಾಡನ್‌ (38) ಮತ್ತವರ ಪತ್ನಿ ಜೆಶಿ ಕಂಡಮಂಗಲತ್ (32) ಅವರು ಅವಘಡ ಸಂಭವಿಸುವ ಸಂದರ್ಭ ತಮ್ಮ ನೆರೆಹೊರೆಯವರಿಗಾಗಿ ಇಫ್ತಾರ್‌ ಊಟ ತಯಾರಿಸುತ್ತಿದ್ದರು ಎಂದು ಅವರ ನೆರೆಹೊರೆಯವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ರಿಜೇಶ್‌ ಅವರು ಟ್ರಾವೆಲ್ಸ್‌ ಮತ್ತು ಪ್ರವಾಸೋದ್ಯಮ ಸಂಸ್ಥೆಯೊಂದರಲ್ಲಿ ಬಿಸಿನೆಸ್‌ ಡೆವಲೆಪ್ಮೆಂಟ್‌ ಮ್ಯಾನೇಜರ್‌ ಆಗಿದ್ದರೆ ಅವರ ಪತ್ನಿ ಜೆಶಿ ಶಾಲಾ ಶಿಕ್ಷಕಿಯಾಗಿದ್ದರು.

ಕೇರಳ ಮೂಲದ ಅವರು ಶನಿವಾರ ಯುಗಾದಿ (ವಿಷು) ಸಂಭ್ರಮದಲ್ಲಿದ್ದರು ಹಾಗೂ ಕೇರಳದ ಸಾಂಪ್ರದಾಯಿಕ 'ವಿಶು ಸಧ್ಯ' ಸಿದ್ಧಪಡಿಸಿ ಕೇರಳದ ತಮ್ಮ ನೆರೆಹೊರೆಯ ಮುಸ್ಲಿಂ ಯುವಕರ ಗುಂಪೊಂದನ್ನು ಇಫ್ತಾರ್‌ ಕೂಟಕ್ಕಾಗಿ ಆಹ್ವಾನಿಸಿದ್ದರು.

ಕಟ್ಟಡದ ಫ್ಲ್ಯಾಟ್ ಸಂಖ್ಯೆ 406 ರಲ್ಲಿ ದಂಪತಿ ವಾಸವಾಗಿದ್ದರೆ ಫ್ಲ್ಯಾಟ್‌ ಸಂಖ್ಯೆ 409 ರಲ್ಲಿದ್ದ ರಿಯಾಸ್‌ ಕೈಕಂಬಂ ಮತ್ತವರ ಏಳು ಮಂದಿ ರೂಮ್‌ಮೇಟ್‌ಗಳನ್ನು ದಂಪತಿ ಇಫ್ತಾರ್‌ ಗೆ ಆಹ್ವಾನಿಸಿದ್ದರು. ಬೆಂಕಿ ಫ್ಲ್ಯಾಟ್‌ ಸಂಖ್ಯೆ 405 ರಲ್ಲಿ ಆರಂಭಗೊಂಡಿತ್ತು.

ಅದೇ ಕಟ್ಟಡದಲ್ಲಿ ರಿಯಾಸ್‌ ಮೊಬೈಲ್‌ ಅಂಗಡಿಯನ್ನು ನಡೆಸುತ್ತಾರೆ. ದಂಪತಿ ಈ ಕಟ್ಟಡಕ್ಕೆ ಎರಡು ವರ್ಷಗಳ ಹಿಂದೆ ಆಗಮಿಸಿದ್ದರೆಂದು ಅವರು ಹೇಳುತ್ತಾರೆ. ಸ್ನೇಹಮಯಿಗಳಾಗಿದ್ದ ದಂಪತಿ ಎಲ್ಲಾ ಹಬ್ಬಗಳ ಸಂದರ್ಭಗಳಲ್ಲೂ ಊಟಕ್ಕಾಗಿ ಆಹ್ವಾನಿಸುತ್ತಿದ್ದರು. ಈ ಹಿಂದೆ ಕೂಡ ಓಣಂ ಮತ್ತು ವಿಷು ಹಬ್ಬಕ್ಕೆ ಆಹ್ವಾನಿಸಿದ್ದರು. ಈ ಬಾರಿ ರಂಝಾನ್ ಆಗಿದ್ದರಿಂದ ಇಫ್ತಾರ್‌ಗಾಗಿ ಆಹ್ವಾನಿಸಿದ್ದರು‌ ಎಂದು ಅವರು ತಿಳಿಸಿದ್ದಾರೆ.

ರಿಯಾಸ್‌ ಅವರ ಇನ್ನೊಬ್ಬ ರೂಮ್‌ಮೇಟ್‌ ಸುಹೈಲ್‌ ಕೊಪ್ಪ ಕೂಡ ಈ ದುರಂತ ತಮಗೆ ಆಘಾತ ನೀಡಿದೆ ಎಂದು ಹೇಳುತ್ತಾರೆ. ದಂಪತಿ ತಮ್ಮ ಹೊಸ ಮನೆಯ ಗೃಹಪ್ರವೇಶಕ್ಕೆ ಮುಂದಿನ ತಿಂಗಳು ಊರಿಗೆ ಆಗಮಿಸಲಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

share
Next Story
X