‘ಪುಲ್ವಾಮ’ ಕುರಿತು ಹೇಳಿಕೆ ನೀಡಿರುವುದಕ್ಕೆ ಸಿಬಿಐಯಿಂದ ಕಿರುಕುಳ: ಸತ್ಯಪಾಲ್ ಮಲಿಕ್ ಆರೋಪ
ಹೊಸದಿಲ್ಲಿ, ಎ. 27: ಜಮ್ಮು ಹಾಗೂ ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರನ್ನು ಸಿಬಿಐ ಶುಕ್ರವಾರ ಹೊಸದಿಲ್ಲಿಯಲ್ಲಿರುವ ಅವರ ನಿವಾಸದಲ್ಲಿ ರಿಲಾಯನ್ಸ್ ವಿಮಾ ಯೋಜನೆ ಕುರಿತು 4 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯಪಾಲ್ ಮಲಿಕ್, 2019ರ ಪುಲ್ವಾಮ ಭಯೋತ್ಪಾದಕ ದಾಳಿಯ ಸಂದರ್ಭ ನರೇಂದ್ರ ಮೋದಿ ಸರಕಾರದ ಪಾತ್ರದ ಕುರಿತು ‘ದಿ ವೈರ್’ ಪತ್ರಿಕೆಯ ಸಂದರ್ಶನದಲ್ಲಿ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಈ ಕಿರುಕುಳ ನೀಡಲಾಗುತ್ತಿದೆ ಎಂದಿದ್ದಾರೆ. ‘‘ನಾನು ಈ ಪ್ರಕರಣದಲ್ಲಿ ದೂರುದಾರ. ದೂರುದಾರನನ್ನು ಸಿಬಿಐ ಈ ರೀತಿ ವಿಚಾರಣೆಗೆ ಒಳಪಡಿಸುವ ಅಗತ್ಯತೆ ಇಲ್ಲ. ಇದು ಪುಲ್ವಾಮ ಕುರಿತು ನನ್ನ ಹೇಳಿಕೆಗೆ ನೀಡುತ್ತಿರುವ ಕಿರುಕುಳ’’ ಎಂದು ಮಲಿಕ್ ಹೇಳಿದ್ದಾರೆ. ಇಂದು ಬಹಿರಂಗಪಡಿಸಿರುವುದನ್ನು ಪುನರಾವರ್ತಿಸಲು ನಾನು ಹಿಂಜರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. ನಾನು ಹೇಳುವುದನ್ನು ಮುಂದುವರಿಸಲಿದ್ದೇನೆ. ಇಡೀ ಉತ್ತರ ಭಾರತದ ಹಾಗೂ ದಕ್ಷಿಣ ಭಾರತದಲ್ಲೂ ಪ್ರವಾಸ ಮಾಡಲಿದ್ದೇನೆ. ಚುನಾವಣೆ ವರೆಗೆ ಇದನ್ನು ಮುಂದುವರಿಸುತ್ತೇನೆ. ಈ ವಿಷಯವನ್ನು ಭೋಪರ್ನಂತೆ ಜೀವಂತವಾಗಿರುಸುತ್ತೇನೆ. ಪುಲ್ವಾಮ ಹಾಗೂ ಇತರ ವಿಷಯಗಳು ಜನರಿಗೆ ನಿಧಾನವಾಗಿ ತಿಳಿಯಲಿದೆ. ಜನರು ಮುಂದಿನ ಚುನಾವಣೆಯಲ್ಲಿ ಅವರನ್ನು ಕಿತ್ತೊಗೆಯುತ್ತಾರೆ ಎಂದು ಅವರು ಮಲ್ಲಿಕ್ ಹೇಳಿದ್ದಾರೆ.
Next Story