Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹುದ್ದೆಯ ಘನತೆ ಮರೆತರೆ ಹೇಗೆ?

ಹುದ್ದೆಯ ಘನತೆ ಮರೆತರೆ ಹೇಗೆ?

-ಟಿ.ಎಂ.ಕೃಷ್ಣ, ಯಲಹಂಕ, ಬೆಂಗಳೂರು-ಟಿ.ಎಂ.ಕೃಷ್ಣ, ಯಲಹಂಕ, ಬೆಂಗಳೂರು4 May 2023 12:18 AM IST
share

ಮಾನ್ಯರೇ,

ಈ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿ, ಬೀದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ಮಾತನಾಡುವಾಗ ಯಥಾಪ್ರಕಾರ ಅವೇ ಹಳಸಲು ಬ್ರಹ್ಮಾಸ್ತ್ರಗಳನ್ನು ಪ್ರಯೋಗ ಮಾಡಿದ್ದಾರೆ. ''ಕಾಂಗ್ರೆಸ್‌ನವರು ನನ್ನನ್ನು ನಿಂದಿಸಿದರು, ಲಿಂಗಾಯತರನ್ನು ಕಳ್ಳರು ಎಂದರು, ಅಂಬೇಡ್ಕರ್‌ರವರನ್ನು ರಾಕ್ಷಸ, ದೇಶದ್ರೋಹಿ, ವಂಚಕ ಎಂದಿದ್ದರು'' ಇತ್ಯಾದಿಯಾಗಿ ಮತದಾರರ ಬಳಿ ಅಲವತ್ತುಕೊಂಡಿದ್ದಾರೆ. ಹಾಗೆಯೇ 'ವಿಷದ ಹಾವನ್ನೂ' ಬಳಸಿಕೊಳ್ಳದೆ ಬಿಡಲಿಲ್ಲ. ''ಕಾಂಗ್ರೆಸ್‌ನವರು ನನ್ನನ್ನು ನಿಂದಿಸುತ್ತಲೇ ಇರಲಿ, ನಾನು ಕರ್ನಾಟಕದ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇನೆ'' ಎಂಬ ಮಹದುಪಕಾರದ ಮಾತನ್ನೂ ಹೇಳಿದ್ದಾರೆ. ಕೆಲಸ ಮಾಡುವುದು ಎಂದರೆ ಚುನಾವಣೆ ಸಮಯದಲ್ಲಿ ಪದೇ ಪದೇ ಕರ್ನಾಟಕಕ್ಕೆ ಬಂದು 'ಚಾಡಿ' ಚುಚ್ಚುವುದೇ? ಬರ, ಪ್ರವಾಹಗಳಿಂದ ರಾಜ್ಯ ತತ್ತರಿಸಿದಾಗ ಮಾನ್ಯ ಪ್ರಧಾನಮಂತ್ರಿಗಳವರು ಕರ್ನಾಟಕದ ಕಡೆ ತಲೆ ಹಾಕಿರಲಿಲ್ಲ. ತುಂಬಾ ಸತಾಯಿಸಿ ಪುಡಿಗಾಸಿನ ಅನುದಾನ ನೀಡಿದ್ದನ್ನು ರಾಜ್ಯದ ಜನ ಮರೆತಿಲ್ಲ. ರಾಜ್ಯದ ತೆರಿಗೆಯ ಪಾಲು ನ್ಯಾಯಯುತವಾಗಿ ಕರ್ನಾಟಕಕ್ಕೆ ಕೊಡುತ್ತಿಲ್ಲವೆಂಬ ಆರೋಪವೂ ಅವರ ಮೇಲಿದೆ. 25 ಸಂಸತ್ ಸದಸ್ಯರ ಬಲ ನೀಡಿದ ಕರ್ನಾಟಕ ಮತದಾರರ ಉಪಕಾರ ಸ್ಮರಣೆಗೆ ನಿದರ್ಶನವೂ ಸಿಗುವುದಿಲ್ಲ. ಹಿಜಾಬ್, ಹಲಾಲ್, ಆಝಾನ್, ವ್ಯಾಪಾರ ನಿರ್ಬಂಧ ಇತ್ಯಾದಿ ಹೀನ ಸಂಸ್ಕೃತಿ ಕರ್ನಾಟಕದಲ್ಲಿ ತಾಂಡವ ವಾಡಿದಾಗ, ಅಂತಹ ಸಮಾಜಘಾತುಕತನಕ್ಕೆ ಕನಿಷ್ಠ ಎಚ್ಚರಿಕೆಯ ರವಾನೆ ಅತ್ತಕಡೆಯಿಂದ ಬರಲಿಲ್ಲ. ರಾಜ್ಯ ಸರಕಾರದ 40 ಶೇ.ಲಂಚದ ಆರೋಪದ ದೂರಿಗೆ ಸ್ಪಂದಿಸಲೇ ಇಲ್ಲ. ಅದಕ್ಕೆ ಸ್ಪಷ್ಟ ಪುರಾವೆ ಗಳು ಸಿಕ್ಕರೂ ಅಂತಹವರ ಮೇಲೆ ಕ್ರಮ ಕೈಗೊಳ್ಳುವ ಕಿಂಚಿತ್ ಪ್ರಯತ್ನವೂ ಆಗಲಿಲ್ಲ. ಅಂಬೇಡ್ಕರ್‌ರವರನ್ನು ಆವತ್ತು ಯಾರೋ ಬೈದಿರಬಹುದು ಆದರೆ, ಪ್ರತಿನಿತ್ಯ ಸಂವಿಧಾನವನ್ನು ಅಧಿಗಮಿಸುವ ಪ್ರಯತ್ನ, ಬದಲಾಯಿಸುತ್ತೇವೆ ಎಂದು ಬೆದರಿಕೆ ಹಾಕುವ ಕೆಲಸ ಮಾಡುತ್ತಿರುವುದು ಯಾರು? ಇದು ಯಾವ ಬೈಗುಳಕ್ಕಿಂತ ಕಡಿಮೆ? ದೇಶದ ಪ್ರಧಾನಮಂತ್ರಿ ಒಮ್ಮೆ ಆಗಮಿಸುವುದು ಎಂದರೆ ಅದಕ್ಕೆ ಹತ್ತಾರು ಕೋಟಿ ರೂ. ವ್ಯಯವಾಗುತ್ತದೆ, ಇದು ಜನರ ತೆರಿಗೆ ಹಣವೇ ಹೊರತು ಬೇರಾವುದೂ ಅಲ್ಲ. ಉನ್ನತ ಹುದ್ದೆಯಲ್ಲಿರುವವರು ತಮ್ಮ ಹುದ್ದೆಯ ಘನತೆ, ಸಮಯದ ಮಹತ್ವ, ಖರ್ಚಾಗುವ ಸಂಪನ್ಮೂಲ, ಇತ್ಯಾದಿಗಳನ್ನೆಲ್ಲಾ ಅರಿತು ಮಾತನಾಡಬೇಕಾಗುತ್ತದೆ. 

share
-ಟಿ.ಎಂ.ಕೃಷ್ಣ, ಯಲಹಂಕ, ಬೆಂಗಳೂರು
-ಟಿ.ಎಂ.ಕೃಷ್ಣ, ಯಲಹಂಕ, ಬೆಂಗಳೂರು
Next Story
X