Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರೈಲ್ವೆ ಸುರಕ್ಷತೆ ನಿಧಿಯ ಹಣ ಫೂಟ್...

ರೈಲ್ವೆ ಸುರಕ್ಷತೆ ನಿಧಿಯ ಹಣ ಫೂಟ್ ಮಸಾಜರ್ ಗಳು, ಪಿಂಗಾಣಿಪಾತ್ರೆ, ಜಾಕೆಟ್, ವೇತನ ಪಾವತಿಗೆ ಬಳಕೆ: ಸಿಎಜಿ ವರದಿ

ಅನ್ಯ ಉದ್ದೇಶಗಳಿಗೆ ಬಳಕೆಯಾದ RRSK ನಿಧಿ

10 Jun 2023 10:04 PM IST
share
ರೈಲ್ವೆ ಸುರಕ್ಷತೆ ನಿಧಿಯ ಹಣ ಫೂಟ್ ಮಸಾಜರ್ ಗಳು, ಪಿಂಗಾಣಿಪಾತ್ರೆ, ಜಾಕೆಟ್, ವೇತನ ಪಾವತಿಗೆ ಬಳಕೆ: ಸಿಎಜಿ ವರದಿ
ಅನ್ಯ ಉದ್ದೇಶಗಳಿಗೆ ಬಳಕೆಯಾದ RRSK ನಿಧಿ

ಹೊಸದಿಲ್ಲಿ: ರೈಲ್ವೆ ಸುರಕ್ಷತಾ ವ್ಯವಸ್ಥೆಯಲ್ಲಿ ಸುಧಾರಣೆಗಾಗಿ ನರೇಂದ್ರ ಮೋದಿ ಸರಕಾರವು 2017ರಲ್ಲಿ ಸೃಷ್ಟಿಸಿದ್ದ ವಿಶೇಷ ನಿಧಿಯ ಹಣವು, ಆದ್ಯತೆ ರಹಿತವಾದ ಉದ್ದೇಶಗಳಿಗೆ ಬಳಕೆಯಾಗಿರುವುದು ಇದೀಗ ಬೆಳಕಿಗೆ ಬಂದಿದೆ.

ಪಾದದ ಮಸಾಜರ್ ಗಳು, ಪಿಂಗಾಣಿ ಪಾತ್ರೆಗಳು, ವಿದ್ಯುತ್ ಸಾಮಾಗ್ರಿಗಳು, ಪೀಠೋಪಕರಣಗಳು, ಚಳಿಗಾಲದ ಜಾಕೆಟ್ ಗಳು, ಕಂಪ್ಯೂಟರ್ ಗಳು, ಎಸ್ಕಲೇಟರ್ ಗಳ ಖರೀದಿಗೆ, ಉದ್ಯಾನವನಗಳನ್ನು ಅಭಿವೃದ್ಧಿಗೆ, ಶೌಚಗೃಹಗಳ ಪುನರ್ನಿರ್ಮಾಣಕ್ಕೆ, ನೌಕರರ ವೇತನ ಮತ್ತು ಬೋನಸ್ ಪಾವತಿ ಇತ್ಯಾದಿ ಉದ್ದೇಶಗಳಿಗೆ ರಾಷ್ಟ್ರೀಯ ರೈಲ್ವೆ ಸಂರಕ್ಷಾ ಕೋಶದ (RRSK) ಹಣವನ್ನು ಬಳಸಲಾಗಿತ್ತೆಂದು ಸಿಎಜಿ ವರದಿ ಬಹಿರಂಗಪಡಿಸಿದೆ ಎಂದು telegraphindia.com ವರದಿ ಮಾಡಿದೆ..

2017-18ರಿಂದ 2020-21ರ 48 ತಿಂಗಳುಗಳ ಅವಧಿಯಲ್ಲಿನ ಡಿಸೆಂಬರ್ 2017, ಮಾರ್ಚ್ 2019, ಸೆಪ್ಟೆಂಬರ್ 2019, ಜನವರಿ 2021 ಈ ನಾಲ್ಕು ತಿಂಗಳುಗಳ 11,464 ರಶೀದಿ, ಬಿಲ್ಲುಗಳ ಯಾದೃಚ್ಚಿಕ (ಒಟ್ಟಾರೆ) ಪರಿಶೀಲನೆಯಿಂದ ಈ ವಿಷಯ ಬೆಳಕಿಗೆ ಬಂದಿದೆ. ಪ್ರತಿ ರೈಲ್ವೆ ವಲಯದ ಎರಡು ಆಯ್ದ ವಿಭಾಗಗಳಲ್ಲಿ ರಾಷ್ಟ್ರೀಯ ರೈಲ್ವೆ ಸಂರಕ್ಷಾ ಕೋಶ (ಆರ್ಆರ್ಎಸ್ಕೆ) ನಿಧಿಗೆ ಸೇರಿದ 48.21 ಕೋಟಿ ರೂ.ಗಳನ್ನು ಮೇಲೆ ತಿಳಿಸಿದಂತಹ ಉದ್ದೇಶಗಳಿಗೆ ಬಳಸಲಾಗಿದೆಯೆಂದು ವರದಿ ತಿಳಿಸಿದೆ.

RRSK ನಿಧಿಯನ್ನು 2017-18ನೇ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ‘ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಐದು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಮೊತ್ತದ ಕಾರ್ಪಸ್ನಿಧಿಯೊಂದಿಗೆ ರಾಷ್ಟ್ರೀಯ ರೈಲ್ವೆ ಸಂರಕ್ಷಾ ಕೋಶವನ್ನು ಸ್ಥಾಪಿಸಲಾಗಿದೆ’ ಎಂದು ಆಗ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಘೋಷಿಸಿದ್ದರು. ಆದರೆ ಈ ನಿಧಿಯ ಹಣವನ್ನು ರೈಲ್ವೆ ಇಲಾಖೆಯು ಆಡಂಬರ ಹಾಗೂ ಐಶಾರಾಮದ ಉದ್ದೇಶಗಳಿಗೂ ಬಳಸಿರುವುದನ್ನು ವರದಿಬೆಟ್ಟು ಮಾಡಿ ತೋರಿಸಿದೆ.

2022ರ ಡಿಸೆಂಬರ್ ನಲ್ಲಿ ಭಾರತೀಯ ಲೆಕ್ಕಮಹಾಪರಿಶೋಧಕರು ಸಲ್ಲಿಸಿದ ರೈಲು ಹಳಿತಪ್ಪುವಿಕೆ ಕುರಿತ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದರು.

2015ರಲ್ಲಿ ಭಾರತೀಯ ರೈಲ್ವೆ ಕುರಿತು ಹೊರಡಿಸಿದ ಶ್ವೇತಪತ್ರವೊಂದರಲ್ಲಿ ದೇಶದ 1.14 ಲಕ್ಷ ಕೋಟಿ ರೈಲ್ವೆ ಜಾಲದಲ್ಲಿ 4500 ಕಿ.ಮೀ. ಹಳಿಗಳನ್ನು ವಾರ್ಷಿಕವಾಗಿ ನವೀಕರಿಸಬೇಕೆಂದು ಶಿಫಾರಸು ಮಾಡಿತ್ತು. ರೈಲ್ವೆ ಸುರಕ್ಷಾ ನಿಧಿಯ ಸ್ಥಾಪನೆಗೆ ಇದೂ ಒಂದು ಪ್ರಮುಖ ಕಾರಣವಾಗಿತ್ತು ಎಂದು ವರದಿ ತಿಳಿಸಿದೆ.

ರಾಷ್ಟ್ರೀಯ ರೈಲ್ವೆ ಸಂರಕ್ಷಣಾ ಕೋಚ್ನ ನಿಧಿಗೆ ಅತ್ಯಂತ ಕಳಪೆಮಟ್ಟದಲ್ಲಿ ಆರ್ಥಿಕ ನಿಧಿಯನ್ನು ಒದಗಿಸಲಾಗಿತ್ತೆಂದು ವರದಿ ಗಮನಸೆಳೆದಿದೆ. ಮೂಲ ನಿಯಮಗಳ ಪ್ರಕಾರ, ಪ್ರತಿ ವರ್ಷವೂ ಈ ನಿಧಿಗೆ 20 ಸಾವಿರ ಕೋಟಿ ರೂ. ಬಜೆಟ್ ಅನುದಾನವಾಗಿ ಬರಬೇಕಿತ್ತು. ಉಳಿದ 5 ಸಾವಿರ ಕೋಟಿರೂ.ಗಳನ್ನು ರೈಲ್ವೆಯ ಆಂತರಿಕ ಸಂಪನ್ಮೂಲಗಳಿಂದ ಸಂಗ್ರಹಿಸಬೇಕಾಗಿತ್ತು.

ನಾಲ್ಕು ವರ್ಷಗಳ ಅವಧಿಯಲ್ಲಿ RRSK ನಿಧಿಗೆ 20 ಸಾವಿರ ಕೋಟಿ ರೂ. ಹರಿದುಬರಬೇಕಿತ್ತು. ಆದರೆ ಕೇವಲ 4225 ಕೋಟಿ ರೂ. ಅಷ್ಟೇ ಪಾವತಿಯಾಗಿದ್ದು, 15,775 ಕೋಟಿ ರೂ.ಅಥವಾ 78.9 ಶೇಕಡಾ ಕೊರತೆಯುಂಟಾಗಿತ್ತು.

share
Next Story
X