2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ ರಶೀದ್ ಅಹ್ಮದ್ ಖಾದ್ರಿ ಸಹಿತ ಐವರಿಗೆ ಪದ್ಮಶ್ರೀ
ಎಸ್ಸೆಂ ಕೃಷ್ಣಗೆ ಪದ್ಮ ವಿಭೂಷಣ, ಸುಧಾ ಮೂರ್ತಿ, ಎಸ್. ಎಲ್ ಭೈರಪ್ಪಗೆ ಪದ್ಮ ಭೂಷಣ
ಹೊಸದಿಲ್ಲಿ,ಜ.25: ಗಣರಾಜ್ಯ ದಿನದ ಮುನ್ನಾದಿನವಾದ ಬುಧವಾರ ಕೇಂದ್ರ ಸರಕಾರವು ಪ್ರತಿಷ್ಠಿತ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಪದ್ಮವಿಭೂಷಣ ಹಾಗೂ ಸಾಹಿತಿ ಎಸ್.ಎಲ್.ಭೈರಪ್ಪ ಮತ್ತು ಸಾಮಾಜಿಕ ಕಾರ್ಯಕರ್ತೆ ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿಗಳು ಒಲಿದಿವೆ.
ಈ ವರ್ಷ 106 ಪದ್ಮಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಆರು ಜನರು ಪದ್ಮವಿಭೂಷಣ,ಒಂಬತ್ತು ಜನರು ಪದ್ಮಭೂಷಣ ಮತ್ತು 91 ಜನರು ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಪಶಸ್ತಿ ವಿಜೇತರ ಪಟ್ಟಿಯಲ್ಲಿ 19 ಮಹಿಳೆಯರಿದ್ದು,ಇಬ್ಬರು ವಿದೇಶಿಯರು/ಎನ್ನಾರೈ/ಪಿಐಒ/ಒಸಿಐ ವರ್ಗಕ್ಕೆ ಸೇರಿದ್ದಾರೆ. ಮರಣೋತ್ತರವಾಗಿ ಏಳು ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಕರ್ನಾಟಕಕ್ಕೆ ಒಟ್ಟು ಎಂಟು ಪ್ರಶಸ್ತಿಗಳು ಸಿಕ್ಕಿದ್ದು, ಖಾದರ್ ವಲಿ ದುಡೆಕಳ (ವಿಜ್ಞಾನ ಮತ್ತು ಇಂಜಿನಿಯರಿಂಗ್),ರಾಣಿ ಮಾಚಯ್ಯ (ಕಲೆ), ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ( ಕಲೆ), ಶಾ ರಶೀದ್ ಅಹ್ಮದ್ ಖಾದ್ರಿ (ಕಲೆ) ಮತ್ತು ಎಸ್.ಸುಬ್ಬರಾಮನ್ (ಪುರಾತತ್ವ) ಅವರು ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಮಾರ್ಚ್/ಎಪ್ರಿಲ್ ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ.
ಗುಜರಾತಿನ ಬಾಲಕೃಷ್ಣ ದೋಶಿ ( ವಾಸ್ತುಶಿಲ್ಪ),ಪ.ಬಂಗಾಳದ ದಿಲೀಪ ಮಹಾಲನಬೀಸ್ (ಔಷಧಿ),ಮುಲಾಯಂ ಸಿಂಗ್ ಯಾದವ್ (ರಾಜಕೀಯ )ಸೇರಿದಂತೆ ಏಳು ಜನರಿಗೆ ಮರಣೋತ್ತರವಾಗಿ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
[ಶಾ ರಶೀದ್ ಅಹ್ಮದ್ ಖಾದ್ರಿ]
[ರಾಣಿ ಮಾಚಯ್ಯ]
#PadmaAwards2023 | Munivenkatappa, Veteran Thamate exponent from Chikkaballapur, working tirelessly towards the preservation and promotion of the folk instrument Thamate to receive Padma Shri in the field of Art (Folk Music) pic.twitter.com/Sg1PC0KWqX
— ANI (@ANI) January 25, 2023
#PadmaAwards2023 | Rani Machaiah, Ummathat Folk Dancer from Kodagu, promoting & preserving Kodava culture through dance to receive Padma Shri in the field of Art (Folk Dance) pic.twitter.com/S3aYB8h1X7
— ANI (@ANI) January 25, 2023