Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. 25 ಗುಂಟೆಯಲ್ಲಿ 5 ಲಕ್ಷ ರೂ....

25 ಗುಂಟೆಯಲ್ಲಿ 5 ಲಕ್ಷ ರೂ. ಗಳಿಸುತ್ತಿರುವ ರೈತ ಚೆನ್ನವೀರಯ್ಯ

ಕುಂಟನಹಳ್ಳಿ ಮಲ್ಲೇಶಕುಂಟನಹಳ್ಳಿ ಮಲ್ಲೇಶ29 April 2024 11:32 AM IST
share
25 ಗುಂಟೆಯಲ್ಲಿ 5 ಲಕ್ಷ ರೂ. ಗಳಿಸುತ್ತಿರುವ ರೈತ ಚೆನ್ನವೀರಯ್ಯ

ಮಂಡ್ಯ: ಕಬ್ಬು, ಭತ್ತ, ರಾಗಿಯಂತಹ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಜೋತುಬಿದ್ದು ಮಂಡ್ಯ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು. ಕೃಷಿ ತಜ್ಞರು, ಕೃಷಿ ಇಲಾಖೆ ಅಧಿಕಾರಿಗಳೂ ಇದನ್ನೇ ಹೇಳುತ್ತಾರೆ. ಹಾಗಾಗಿ ಮಂಡ್ಯದ ರೈತರು ಬೆಳೆ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಲವು ರೈತರು ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ. ಅಂತಹವರ ಸಾಲಿನಲ್ಲಿ ಚೆನ್ನವೀರಯ್ಯ ಒಬ್ಬರು.

ಮಂಡ್ಯ ತಾಲೂಕು ಆಲಕೆರೆ ಗ್ರಾಮದ ಚೆನ್ನವೀರಯ್ಯ ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಸೊಪ್ಪು, ತರಕಾರಿ, ಹೂವು, ಇತರ ತೋಟಗಾರಿಕೆ ಬೆಳೆಗಳನ್ನು ಬೆಳೆದು ಕೈತುಂಬಾ ಹಣ ಗಳಿಸುತ್ತಿದ್ದಾರೆ. ಕೇವಲ 25 ಗುಂಟೆ ಭೂಮಿಯಲ್ಲಿ ವಾರ್ಷಿಕ ಸರಾಸರಿ 5 ಲಕ್ಷ ರೂ. ಆದಾಯ ಮಾಡುತ್ತಿದ್ದಾರೆ. ಇವರಿಂದ ಪ್ರೇರಣೆಗೊಂಡು ಗ್ರಾಮದ ಇತರ ಕೆಲವು ರೈತರೂ ಬೆಳೆ ಪದ್ದತಿ ಬದಲಾವಣೆಯತ್ತ ಪ್ರಯತ್ನ ನಡೆಸಿದ್ದಾರೆ.

ಚೆನ್ನವೀರಯ್ಯ ಅವರಿಗೆ ಎರಡೂವರೆ ಎಕರೆ ಜಮೀನಿದ್ದು, ಪೂರ್ವಿಕರಂತೆ ಕಬ್ಬು, ಭತ್ತ, ರಾಗಿಯನ್ನು ಪ್ರಮುಖವಾಗಿ ಬೆಳೆಯುತ್ತಿದ್ದಾರೆ. ಕೆಆರ್‌ಎಸ್ ಜಲಾಶಯದ ನೀರು ಇದೆ. ಆದರೆ, ಇತ್ತೀಚೆಗೆ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿರುವುದರಿಂದ ಹೆಚ್ಚು ನೀರು ಬೇಡುವ ಮತ್ತು ದೀರ್ಘಾವಧಿಯ ಕಬ್ಬು, ಭತ್ತ, ರಾಗಿ ಫಸಲು ಸಂಪೂರ್ಣವಾಗಿ ಕೈಸೇರುತ್ತಿಲ್ಲ. ಜತೆಗೆ ಸರಿಯಾದ ದರವೂ ಸಿಗುತ್ತಿಲ್ಲ. ಹಾಗಾಗಿ ಕಡಿಮೆ ನೀರು, ಕಡಿಮೆ ವೆಚ್ಚದ ಅಲ್ಪಾವಧಿಯ ಸೊಪ್ಪು, ತರಕಾರಿ ಬೆಳೆಯಲು ಸಣ್ಣವೀರಯ್ಯ ತೀರ್ಮಾನಿಸಿದರು.

ಕಳೆದ ವರ್ಷ ತಮ್ಮ ಜಮೀನಿನ 25 ಗುಂಟೆಯನ್ನು ತರಕಾರಿ ಬೆಳೆಗೆ ಆಯ್ಕೆಮಾಡಿಕೊಂಡರು. ಈ ಬೆಳೆಗಳೆಲ್ಲಾ ಮೂರು ತಿಂಗಳ ಬೆಳೆಗಳು. ವರ್ಷಕ್ಕೆ ನಾಲ್ಕು ಬೆಳೆ ತೆಗೆಯಬಹುದು. ಮೊದಲ ವರ್ಷ ಸೌತೆಕಾಯಿ ಹಾಕಿದರು. ಚೆನ್ನಾಗಿ ಫಸಲು ಬಂತು, ಬೆಲೆಯೂ ಸಿಕ್ಕಿತು. ಮೂರೇ ತಿಂಗಳಿಗೆ ಒಂದು ಲಕ್ಷ ರೂ. ಆದಾಯ ವೀರಯ್ಯ ಅವರ ಕೈಸೇರಿತು. ನಂತರ, ಟೊಮೆಟೊ ಬೆಳೆಯಿಂದ 1.25 ಲಕ್ಷ ರೂ. ಹಾಗೂ ಚೆಂಡುಹೂವಿನಿಂದ 50 ಸಾವಿರ ರೂ. ಸಿಕ್ಕಿತು. ಇದೀಗ ಬೀನ್ಸ್ ಬೆಳೆದಿದ್ದು, ಈಗಾಗಲೇ ಅರ್ಧ ಫಸಲು ಕಟಾವಾಗಿದೆ, ಇನ್ನೂ ಅರ್ಧ ಕಟಾವು ಸಿಗಲಿದೆ. ಪ್ರಸ್ತುತ ಬೀನ್ಸ್‌ಗೆ ಮಾರುಕಟ್ಟೆಯಲ್ಲಿ ಕನಿಷ್ಠ 150 ರೂ.ಗಳಿದ್ದು, ಅದರಿಂದ 1.25 ಲಕ್ಷ ರೂ. ಸಿಗುವುದು ಖಚಿತವಾಗಿದೆ.

ಕಡಿಮೆ ನೀರು, ವೆಚ್ಚದ ಸೊಪ್ಪು, ತರಕಾರಿ, ಹೂವು ಬೆಳೆಯ ಮೂಲಕ ಲಾಭ ಬರುವುದು ಖಚಿತವಾಗಿದೆ ಎಂದು ದೃಢವಾಗಿ ಹೇಳುತ್ತಾರೆ ಚೆನ್ನವೀರಯ್ಯ.

ಇದಲ್ಲದೆ, ಸದರಿ ಭೂಮಿಯಲ್ಲಿ 40 ತೆಂಗಿನ ಮರಗಳು ಫಲ ಕೊಡುವ ಹಂತಕ್ಕೆ ಬಂದಿವೆ. ಜತೆಗೆ, ಅಲ್ಲಿ ಬೆಳೆಯುವ ಹುಲ್ಲಿನಿಂದ ಎರಡು ಹಸುಗಳನ್ನು ಸಾಕುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿಗೆ ಅಂಟಿಕೊಂಡಿರುವ ರೈತರು ಚೆನ್ನವೀರಯ್ಯ ಅವರ ಯಶಸ್ಸಿನ ಹಾದಿಯನ್ನು ಅನುಸರಿಸಿದರೆ ಯಶಸ್ಸು ಪಡೆಯಬಹುದು.

ನಾನು ನಮ್ಮ ಪೂರ್ವಿಕರಂತೆ ಸಾಂಪ್ರದಾಯಿಕವಾಗಿ ಕಬ್ಬು, ಭತ್ತ, ರಾಗಿಯನ್ನು ಬೆಳೆಯುತ್ತಿದ್ದೆ. ಇತ್ತೀಚೆಗೆ ಮಳೆ ಕಡಿಮೆಯಾಗಿ ನೀರಿನ ಕೊರತೆ ಒಂದೆಡೆಯಾದರೆ, ಬೆಳೆದ ಬೆಳೆಗೆ ಉತ್ತಮ ದರವೂ ಸಿಗುತ್ತಿರಲಿಲ್ಲ. ಹಾಗಾಗಿ 25 ಗುಂಟೆಯನ್ನು ಆಯ್ಕೆಮಾಡಿಕೊಂಡು ತರಕಾರಿ ಸೊಪ್ಪು, ತರಕಾರಿ ಬೆಳೆಯಲು ಯತ್ನಿಸಿದೆ. ಅದರಲ್ಲಿ ಯಶಸ್ಸು ಕಂಡಿದ್ದೇನೆ. ಇರುವ ಕೊಳವೆ ಬಾವಿ ನೀರು ಸಾಕಾಗುತ್ತಿದೆ. ದಿನನಿತ್ಯ ಬೇಡಿಕೆ ಇರುವ ಸೊಪ್ಪು, ತರಕಾರಿ ಬೆಳೆಗಳಿಂದ ಲಾಭ ಪಡೆಯಬಹುದು.

-ಚೆನ್ನವೀರಯ್ಯ, ಯಶಸ್ವಿ ಕೃಷಿಕ

share
ಕುಂಟನಹಳ್ಳಿ ಮಲ್ಲೇಶ
ಕುಂಟನಹಳ್ಳಿ ಮಲ್ಲೇಶ
Next Story
X