ಮಂಗಳೂರು: ಬಿಜೈ ಕಾಪಿಕಾಡ್ ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ
ಮಂಗಳೂರು: ಮಹಾನಗರ ಪಾಲಿಕೆಯ 23 ಮತ್ತು 24 ನೆಯ ವಾರ್ಡಿನ ಗೃಹಲಕ್ಷ್ಮಿ ಯೋಜನೆಗೆ ಕುದ್ಮಲ್ ರಂಗರಾವ್ ಭವನ ಬಿಜೈ ಕಾಪಿಕಾಡ್ ನಲ್ಲಿ ಚಾಲನೆ ನೀಡಲಾಯಿತು.
ಕಾರ್ಪೋರೇಟರ್ ಎಂ ಶಶಿಧರಹೆಗ್ಡೆ ಹಾಗೂ ಕಾರ್ಪೋರೇಟರ್ ರಂಜಿನಿ ಕೋಟ್ಯಾನ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾನಗರಪಾಲಿಕೆ ಉಪಆಯುಕ್ತರು ರವಿಕುಮಾರ್, ರಜನೀಶ್ ಕಾಪಿಕಾಡ್,ರಾಜೇಂದ್ರ ಚಿಲಿಂಬಿ,ದೇವೇಂದ್ರ ಕಾಪಿಕಾಡ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಭಾಗವಹಿದರು.
Next Story