ಶಾಂತಿಗೆ ಆದ್ಯತೆಯನ್ನು ದೌರ್ಬಲ್ಯವೆಂದು ಪರಿಗಣಿಸಬಾರದು: ಪಾಕ್ ಪ್ರಧಾನಿ
ಶಹಬಾಝ್ ಶರೀಫ್ | PHOTO : PTI
ಇಸ್ಲಾಮಾಬಾದ್: ತಮ್ಮ ದೇಶವು ಯಾವತ್ತೂ ಶಾಂತಿಗೆ ಆದ್ಯತೆ ನೀಡುತ್ತದೆ. ಆದರೆ ಇದನ್ನು ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಹೇಳಿದ್ದಾರೆ.
ಪಾಕಿಸ್ತಾನದ ಪಡೆಗಳು ತಾಯ್ನಾಡಿನ ಪ್ರತೀ ಇಂಚನ್ನೂ ರಕ್ಷಿಸಲು ಸನ್ನದ್ಧವಾಗಿವೆ. ಸ್ವ-ನಿರ್ಣಯದ ಹಕ್ಕಿಗಾಗಿ ಕಾಶ್ಮೀರದ ಜನತೆ ನಡೆಸುತ್ತಿರುವ ಹೋರಾಟಕ್ಕೆ ಪಾಕಿಸ್ತಾನದ ಬೆಂಬಲ ಮುಂದುವರಿಯಲಿದೆ ಎಂದು ಷರೀಫ್ ಹೇಳಿರುವುದಾಗಿ ವರದಿಯಾಗಿದೆ.
ಪಹಲ್ಗಾಮ್ ದಾಳಿಯ ಬಗ್ಗೆ ತಟಸ್ಥ ತನಿಖೆ ನಡೆಸಬೇಕೆಂದು ಆಗ್ರಹಿಸಿರುವ ಪಾಕ್ ಪ್ರಧಾನಿ, ತಟಸ್ಥ, ಪಾರದರ್ಶಕ ತನಿಖೆಯನ್ನು ತಮ್ಮ ದೇಶ ಸದಾ ಬೆಂಬಲಿಸುತ್ತದೆ ಎಂದಿದ್ದಾರೆ.
Next Story