ತಮಗಾಗಿ ಬದುಕಿದವರು ತಾವಾಗಿಯೇ ಉಳಿದು ಬಿಡುತ್ತಾರೆ, ಇತರರಿಗಾಗಿ ಬದುಕಿದವರು ಇತಿಹಾಸದಲ್ಲಿ ಉಳಿದುಬಿಡುತ್ತಾರೆ : ಗೊಲ್ಲಹಳ್ಳಿ ಶಿವ ಪ್ರಸಾದ್

ಕೋಲಾರ :ಜ.29 : ತಮಗಾಗಿ ಬದುಕಿದವರು ತಾವಾಗಿಯೇ ಉಳಿದು ಬಿಡುತ್ತಾರೆ ಇತರರಿಗಾಗಿ ಬದುಕಿದವರು ಇತಿಹಾಸದಲ್ಲಿ ಉಳಿದುಬಿಡುತ್ತಾರೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷರು ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ಇಂದು ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಸಹಯೋಗದಲ್ಲಿ 2024-25 ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಓದು ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಹಾನ್ ಚೇತನ ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು. ಜಗತ್ತಿನಲ್ಲಿ ಯಾರಿಗೂ ಇಲ್ಲದಂತಹ ವಿಗ್ರಹಗಳು ಅಂಬೇಡ್ಕರ್ ಅವರಿಗೆ ಇವೆ ಅಂದರೆ ನಾವು ಅರ್ಥ ಮಾಡಿಕೊಳ್ಳಬೇಕು. ಸಮಾನತೆಯ ಸಂಕೇತವೇ ಅಂಬೇಡ್ಕರ್ ಆಗಿದ್ದಾರೆ. ಅವರು ಪ್ರತಿಯೊಂದು ವಿಷಯದಲ್ಲಿ ಆಸಕ್ತಿ ಹೊಂದಿದ್ದರು ಮಹಿಳೆಯರ ಹಕ್ಕುಗಳಿಗಾಗಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವರು. ಪ್ರತಿಯೊಬ್ಬ ಮಹಿಳೆ ಅಂಬೇಡ್ಕರ್ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ ಎಂದರು.
ಅಂಬೇಡ್ಕರ್ ಓದು ಕೋಲಾರ ಜಿಲ್ಲಾ ಸಂಚಾಲಕರಾದ ಜೇ.ಜಿ.ನಾಗರಾಜ್ ಅವರು ಪ್ರಾಸ್ತಾವಿಕ ಭಾಷಣ ನಡೆಸಿ ಯುವಕರಲ್ಲಿ ಅಂಬೇಡ್ಕರ್ ಅವರ ಚಿಂತನೆಗಳನ್ನು ತುಂಬುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ, ಅಂಬೇಡ್ಕರ್ ಚಿಂತನೆಗಳು ಸ್ಥಾವರವಾಗಿರಬಾರದು ಚಲನವಾಗಿರಬೇಕು ಮತ್ತು ಬಹುಮಾನ ಎಂಬುದು ಸಾಂಕೇತಿಕ ಅಂಬೇಡ್ಕರ್ ಅವರ ಚಿಂತನೆಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ರಮ ಮಾಡುತ್ತಿದೆ ಎಂದರು. ಹೆಣ್ಣು ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ಜಾರಿಗೆ ತಂದವರು ಅಂಬೇಡ್ಕರ್ ಎಂದು ಹೇಳಿದರು.
ಅಂಬೇಡ್ಕರ್ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಪ್ರತಿಯೊಂದು ಸಮುದಾಯಕ್ಕೂ ಸೇರಿದವರು ಆದ್ದರಿಂದ ಕೇವಲ 20 ರೂಪಾಯಿ ಕೊಟ್ಟು ಅಂಬೇಡ್ಕರ್ ಅವರ ಪುಸ್ತಕ ಖರೀದಿಸಿ ಮಾಹಿತಿಯನ್ನು ಓದಿ ಎಂದು ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗೋಪಿನಾಥ್ ಅವರು ಮಾತನಾಡಿ ಅಂಬೇಡ್ಕರ್ ಅವರ ಬಗ್ಗೆ ಪೂರ್ವಗ್ರಹ ಪೀಡಿತ ಅಭಿಪ್ರಾಯ ಇರುವುದರಿಂದ ಅದನ್ನು ಕ್ಷೀಣಿಸುವ ಕೆಲಸ ಆಗಬೇಕಾಗಿದೆ ಅವರು ರಚಿಸಿ ಕೊಟ್ಟಿರುವ ಸಂವಿಧಾನವನ್ನು ಪ್ರತಿಯೊಂದು ಜಾತಿ ಸಮುದಾಯಕ್ಕೂ ಸೇರಿದೆ ಮತ್ತು ಉಪಾಸನಾ, ಸಮಾನ ಬಾಳ್ವಿಕೆ ನೀಡಿರುವುದು ಸಂವಿಧಾನ ನೀವು ಮನುಷ್ಯರಾಗಿ ನಮ್ಮನ್ನು ಮನುಷ್ಯರಾಗಿ ಬದುಕಲು ಬಿಡಿ ಎಂದು ಮಾತ್ರ ಅಂಬೇಡ್ಕರ್ ತಿಳಿಸಿದ್ದಾರೆ.
ದೇಶದ ಸಾರ್ವಭೌಮತೆಯನ್ನು ಪ್ರತಿಯೊಬ್ಬರೂ ಕಾಪಾಡಿ ಮತ್ತು ಈ ಅಂಬೇಡ್ಕರ್ ಓದು ಎಂಬ ಕಾರ್ಯಕ್ರಮವನ್ನು ಶಾಲೆಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯಕ್ರಮ ಆಗಬೇಕಾಗಿದೆ ಎಂದು ಸಂವಿಧಾನ ಕರಡು ಸಮಿತಿಯ ಸದಸ್ಯರಾಗಿದ್ದ ಟಿ.ಚೆನ್ನಯ್ಯ ಅವರನ್ನು ನೆನೆಸಿಕೊಂಡು ಕಲ್ಮಶ ಇಲ್ಲದೆ ಅಂಬೇಡ್ಕರ್ ಅವರನ್ನು ಪ್ರತಿಯೊಂದು ಸಮುದಾಯದವರು ನೆನೆದು ಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯರ್ಶಿ ಶಿವಕುಮಾರ್ ಅವರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅಂದರೆ ಭಾರತಕ್ಕೆ ಶಕ್ತಿ ಅವರ ಕೊಡುಗೆಗಳು ನಮಗೆ ಮುಖ್ಯವಾಗಿ ಸಂವಿಧಾನ ವನ್ನೂ ಕೊಡುಗೆ ಯಾಗಿ ನೀಡಿದ್ದಾರೆ ಸಂವಿಧಾನಕ್ಕೆ ಪ್ರತಿಯೊಬ್ಬರೂ ಗೌರವಿಸಬೇಕಾಗುತ್ತದೆ ಮಾನ್ಯರು ಸಂವಿಧಾನವನ್ನು ರಚಿಸಲು ವಿಶ್ವವನ್ನೆ ಸುತ್ತಾಡಿ ಅಧ್ಯಯನ ಮಾಡಿ ಅನೇಕರು ಸೇರಿ ನಮಗೆ ಸಂವಿಧಾನ ಜಾರಿಗೆ ತಂದುಕೊಟ್ಟಿರುತ್ತಾರೆ ಆದ್ದರಿಂದಲೇ ನಾವು ಸುರಕ್ಷಿತವಾಗಿದ್ದೇವೆ ನಮ್ಮ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿವರೆಗೂ ರಕ್ಷಣೆ ಕೊಟ್ಟು ರಾಜಕೀಯವಾಗಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಮೀಸಲಾತಿಯನ್ನು ಸಂವಿಧಾನದಲ್ಲಿ ನೀಡಿದ್ದಾರೆ. ಅಂತಹ ಬೃಹತ್ ಸಂವಿಧಾನವನ್ನು ನಮಗೆ ಡಾ. ಬಿ ಆರ್. ಅಂಬೇಡ್ಕರ್ ಅವರು ರಚಿಸಿ ಕೊಟ್ಟಿದ್ದಾರೆ ಅದನ್ನು ನಾವು ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ, ಆಶುಭಾಷಣ ಸ್ಪರ್ಧೆ,ಕವಿತೆಗಳ ರಚನೆ,ಕಾವ್ಯ ವಾಚನ,ರಸಪ್ರಶ್ನೆ, ಸೇರಿದಂತೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ವಿಭಗಾಧಿಕಾರಿ ಡಾ. ಮೈತ್ರಿ,ಕರ್ನಾಟಕ ದಲಿತಾ ಕ್ರಿಯಾ ಸಮಿತಿಯ ರಾಜ್ಯ ಸಂಚಾಲಕ ಡಾ|| ಎಂ. ಚಂದ್ರಶೇಖರ್. ಸಂವಿಧಾನ ಓದು ಅಭಿಯಾನದ ಜಿಲ್ಲಾ ಸಂಚಾಲಕ ಜೆ.ಜೆ. ನಾಗರಾಜ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಎನ್.ವಿಜಯಲಕ್ಷ್ಮಿ , ಬುದ್ಧ ಎಜುಕೇಷನ್ ಸೊಸೈಟಿ ಅಂಡ್ ಟ್ರಸ್ಟ್ ಅಧ್ಯಕ್ಷರು, ಚಂದ್ರಶೇಖರ್ , ನಗರಸಭೆ ಉಪಾಧ್ಯಕ್ಷರಾದ ಸಂಗೀತ ಜಗದೀಶ್, ಸಾರ್ಉವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಶೋಕ್ ಕುಮಾರ್, ಉಪನ್ಯಾಸಕ ಡಾ|| ನಾರಾಯಣ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಶೋಕ್ ಕುಮಾರ್ ಬಾವಗಿ , ಮೈತ್ರಿ ಕಲಾವಿದರಾದ ಮಾರುತಿ ಪ್ರಸಾದ್, ಈ ನೆಲ ಈ ಜಲ ವೆಂಕಟಾಚಲಪತಿ,ಆವಣಿ ಕಾಶಿ, ಕೊಂಡರಾಜನಹಳ್ಳಿ ಮಂಜುಳಾ ಸೇರಿದಂತೆ ವಿದ್ಯಾರ್ಥಿಗಳು, ಜಿಲ್ಲೆಯ ದಲಿತ ಮುಖಂಡರು ಉಪಸ್ಥಿತರಿದ್ದರು