ಪಶ್ಚಿಮ ಬಂಗಾಳ | ಗುಂಪು ದಾಳಿಗೊಳಗಾದ ಯುವಕ ಮೃತ್ಯು
ಸಾಂದರ್ಭಿಕ ಚಿತ್ರ
ಕೋಲ್ಕತಾ : ದುಷ್ಕರ್ಮಿಗಳಿಂದ ಥಳಿತಕ್ಕೊಳಗಾದ 23 ವರ್ಷದ ಯುವಕನೋರ್ವ ಪಶ್ಚಿಮಬಂಗಾಳದ ಝಾರ್ಗಾಂವ್ ಜಿಲ್ಲೆಯ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದಾನೆ.
ಇದು ರಾಜ್ಯದಲ್ಲಿ ಗುಂಪಿನಿಂದ ನಡೆದ ದಾಳಿಯಿಂದ ಸಾವನ್ನಪ್ಪಿರುವ ಮೂರನೇ ಪ್ರಕರಣವಾಗಿದೆ. ಇದೇ ರೀತಿಯ ಘಟನೆಗಳು ಕೋಲ್ಕತ್ತಾ ಹಾಗೂ ಸಾಲ್ಟ್ ಲೇಕ್ನಲ್ಲಿ ಅನುಕ್ರಮವಾಗಿ ಜೂನ್ 28 ಹಾಗೂ 29ರಂದು ನಡೆದಿತ್ತು.
ಮೃತಪಟ್ಟ ಯುವಕನನ್ನು ಸೌರಭ್ ಸಾಹು ಎಂದು ಗುರುತಿಸಲಾಗಿದೆ. ಝಾರ್ಗಾಂವ್ ಪಟ್ಟಣ ಸಮೀಪದ ಜಂಬೋನಿ ಪ್ರದೇಶದ ರಸ್ತೆಯೊಂದರಲ್ಲಿ ಈತ ಬಿದ್ದುಕೊಂಡಿರುವುದನ್ನು ಜೂನ್ 22ರಂದು ಸ್ಥಳೀಯರು ಗಮನಿಸಿದ್ದರು. ಅನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಂಭೀರ ಗಾಯಗೊಂಡಿದ್ದ ಆತ ಕೊನೆಯುಸಿರೆಳೆದ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಹು ಕುಟುಂಬ ಜೂನ್ 27ರಂದು ದಾಖಲಿಸಿದ ದೂರಿನ ಆಧಾರದಲ್ಲಿ ಅನಾಮಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story