Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಸ್ಪಶ್ಯತೆಯು ಕೇವಲ ಜಾತಿ ಆಧಾರಿತವಾಗಿಲ್ಲ...

ಅಸ್ಪಶ್ಯತೆಯು ಕೇವಲ ಜಾತಿ ಆಧಾರಿತವಾಗಿಲ್ಲ : ಅನುಭವ ಬಿಚ್ಚಿಟ್ಟ ಬ್ಲಿಂಕಿಟ್ ಡೆಲಿವರಿ ಬಾಯ್

ಒಂದು ದಿನದ ಮಟ್ಟಿಗೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದ ಸಂಸ್ಥೆಯೊಂದರ ಕ್ರಿಯೇಟಿವ್‌ ಹೆಡ್‌!

ವಾರ್ತಾಭಾರತಿವಾರ್ತಾಭಾರತಿ22 April 2025 5:22 PM IST
share
ಅಸ್ಪಶ್ಯತೆಯು ಕೇವಲ ಜಾತಿ ಆಧಾರಿತವಾಗಿಲ್ಲ : ಅನುಭವ ಬಿಚ್ಚಿಟ್ಟ ಬ್ಲಿಂಕಿಟ್ ಡೆಲಿವರಿ ಬಾಯ್

ಹೊಸದಿಲ್ಲಿ: ದಿಲ್ಲಿಯ ಸಂಸ್ಥೆಯೊಂದರಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವರು ಡೆಲಿವರಿ ಬಾಯ್ ಗಳು ಪ್ರತಿದಿನ ಅನುಭವಿಸುತ್ತಿರುವುದನ್ನು ದಾಖಲಿಸಲು ಸ್ವತಃ ಬ್ಲಿಂಕಿಟ್ ಡೆಲಿವರಿ ಪಾರ್ಟನರ್ ಆಗಿ ಕೆಲಸ ಮಾಡಿದ್ದಾರೆ. ಡೆಲಿವರಿ ಬಾಯ್ ಗಳಿಗೆ ಕಳಂಕ ಮೆತ್ತಿಕೊಂಡಿರುವುದು ಮತ್ತು ಅವರ ವಿರುದ್ಧ ತಾರತಮ್ಯ ನಿಜ ಎನ್ನುವುದನ್ನು ಅವರು ತನ್ನ ಅನುಭವದಲ್ಲಿ ಕಂಡುಕೊಂಡಿದ್ದಾರೆ.

ಲಿಂಕ್ಡ್ಇನ್ ನಲ್ಲಿ ವೈರಲ್ ಆಗಿರುವ ಪೋಸ್ಟ್ ನಲ್ಲಿ ಸಲ್ಮಾನ್ ಸಲೀಮ್ ಅವರು ತಾನು ಆ್ಯಪ್ ಗೆ ಸೇರ್ಪಡೆಗೊಂಡಿದ್ದೆ ಮತ್ತು ಸಮೀಪದ ಬ್ಲಿಂಕಿಟ್ ಸ್ಟೋರ್ ನಿಂದ ಡೆಲಿವರಿಗಾಗಿ ಆರ್ಡರ್ ಗಳನ್ನು ಪಡೆದುಕೊಂಡಿದ್ದೆ ಎಂದು ತಿಳಿಸಿದ್ದಾರೆ.

‘ಅಸ್ಪಶ್ಯತೆ ಜಾತಿಗೆ ಮಾತ್ರ ಸೀಮಿತವಾಗಿಲ್ಲ. ನಾನು ಡೆಲಿವರಿ ಮಾಡಬೇಕಾಗಿದ್ದ ಸರಕುಗಳನ್ನು ಸ್ಟೋರ್ ನಿಂದ ಪಡೆದುಕೊಂಡು ಸಂಚಾರ ದಟ್ಟಣೆ, ಬಿರುಬಿಸಿಲು ಮತ್ತು ಧೂಳಿನ ನಡುವೆಯೇ ಅವುಗಳನ್ನು ಗ್ರಾಹಕರಿಗೆ ತಲುಪಿಸಲು ಧಾವಿಸಿದ್ದೆ. ಈ ವೃತ್ತಿಯು ತನಗೆ ಅರ್ಹ ಘನತೆಯನ್ನು ಪಡೆದುಕೊಳ್ಳಲು ಇನ್ನೂ ಹೆಣಗಾಡುತ್ತಿದೆ ಎನ್ನುವುದನ್ನು ನಾನು ಅರಿತುಕೊಂಡೆ’ ಎಂದು ತನ್ನ ಪೋಸ್ಟ್ನಲ್ಲಿ ತಿಳಿಸಿರುವ ಸಲೀಮ್,ಪೋಲಿಸರು ಮಾತ್ರವಲ್ಲ,ತಮ್ಮ ಎಸಿ ಕಾರುಗಳಲ್ಲಿಯ ಜನರು ಸಹ ಡೆಲಿವರಿ ಬಾಯ್ಗಳನ್ನು ಎರಡನೇ ದರ್ಜೆಯ ಪ್ರಯಾಣಿಕರಂತೆ ನೋಡುತ್ತಾರೆ ಎಂದಿದ್ದಾರೆ.

ಆದರೆ ಅವರಿಗೆ ನೋವು ನೀಡಿದ್ದು ಬಿರುಬಿಸಿಲಲ್ಲ, ಒಳಗೊಳ್ಳುವಿಕೆಯನ್ನು ಆನ್ಲೈನ್ನಲ್ಲಿ ಬೋಧಿಸುವ ಜನರ ವರ್ತನೆ ಅವರಿಗೆ ನೋವನ್ನುಂಟು ಮಾಡಿದೆ. ಅನೇಕ ಹೌಸಿಂಗ್ ಸೊಸೈಟಿಗಳಲ್ಲಿ ಭದ್ರತಾ ಸಿಬ್ಬಂದಿಗಳು ಮುಖ್ಯ ಲಿಫ್ಟ್ ಅನ್ನು ಬಳಸಲು ಅವರಿಗೆ ನಿರಾಕರಿಸಿದ್ದರು. ಕೆಲವೊಮ್ಮೆ ನಾಲ್ಕನೇ ಅಂತಸ್ತಿನವರೆಗೂ ಮೆಟ್ಟಲುಗಳನ್ನು ಬಳಸುವಂತೆ ಅಥವಾ ಸರ್ವಿಸ್ ಲಿಫ್ಟ್ ಬಳಸುವಂತೆ ಅವರಿಗೆ ಸೂಚಿಸಲಾಗಿತ್ತು.

ಶ್ರೀಮಂತರು ಮತ್ತು ವಿದ್ಯಾವಂತರು ಎಂದು ಕರೆಯಲ್ಪಡುವವರು ವಾಸವಾಗಿರುವ ಹೌಸಿಂಗ್ ಸೊಸೈಟಿಗಳಲ್ಲಿ ಇಂತಹ ಅಸಡ್ಡೆ ಸಾಮಾನ್ಯವಾಗಿತ್ತು, ವ್ಯಂಗ್ಯವೆಂದರೆ ಇದೇ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ತಾರತಮ್ಯದ ಎಲ್ಲ ರೂಪಗಳ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಾರೆ ಎಂದು ಸಲೀಮ್ ಬರೆದಿದ್ದಾರೆ.

‘ಗೌರವವು ವ್ಯಕ್ತಿಯ ಉಡುಪಿನೊಂದಿಗೆ ಬರಬಾರದು. ಒಂದು ಸಮಾಜವಾಗಿ ಡೆಲಿವರಿ ಬಾಯ್ಗಳೂ ಇತರರಂತೆ ಮನುಷ್ಯರು ಎನ್ನುವುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ. ಯಾವುದೇ ವ್ಯಕ್ತಿಯ ಸಮವಸ್ತ್ರ ಅಥವಾ ನೋಟವನ್ನು ಆಧರಿಸಿ ಆತನ ಗುಣ,ಸ್ಥಿತಿ ಅಥವಾ ಮೌಲ್ಯದ ಬಗ್ಗೆ ಊಹೆಗಳನ್ನು ಮಾಡುವುದನ್ನು ನಿಲ್ಲಿಸಬೇಕು. ವೃತ್ತಿ ಯಾವುದೇ ಆಗಿರಲಿ, ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರಾಗಿದ್ದಾರೆ ’ ಎಂದು ಹೇಳಿರುವ ಸಲೀಮ್,ತಮ್ಮ ಡೆಲಿವರಿ ಬಾಯ್ಗಳು ಎದುರಿಸುತ್ತಿರುವ ತಾರತಮ್ಯದ ವಿರುದ್ಧ ಜಾಗ್ರತಿ ಅಭಿಯಾನಗಳನ್ನು ನಡೆಸಲು ಬ್ಲಿಂಕಿಟ್ ಮತ್ತು ಝೆಪ್ಟೋದಂತಹ ವಿತರಣಾ ಸಂಸ್ಥೆಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X