ತೆಲಂಗಾಣ: ಹೈಕೋರ್ಟ್ನಲ್ಲಿ ವಾದಿಸುತ್ತಿದ್ದಾಗಲೇ ವಕೀಲ ಹೃದಯಾಘಾತದಿಂದ ಮೃತ್ಯು

ತೆಲಂಗಾಣ ಉಚ್ಛ ನ್ಯಾಯಾಲಯ | PC : X
ಹೈದರಾಬಾದ್: ಪ್ರಕರಣವೊಂದರಲ್ಲಿ ವಾದಿಸುತ್ತಿದ್ದ ಹಿರಿಯ ವಕೀಲರೋರ್ವರು ಹೃದಯಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ತೆಲಂಗಾಣ ಉಚ್ಛ ನ್ಯಾಯಾಲಯದಲ್ಲಿ ಸಂಭವಿಸಿದೆ.
ಪಸ್ನೂರು ವೇಣುಗೋಪಾಲ ರಾವ್(66) ಅವರು ಅಪರಾಹ್ನ 12:30ರ ಸುಮಾರಿಗೆ ನ್ಯಾಯಾಧೀಶ ಲಕ್ಷ್ಮೀನಾರಾಯಣ ಆಲಿಶೆಟ್ಟಿಯವರ ಮುಂದೆ ವಾದ ಮಂಡಿಸುತ್ತಿದ್ದಾಗ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಸಹ ವಕೀಲರು ತಕ್ಷಣವೇ ಅವರಿಗೆ ಸಿಪಿಆರ್ ನಡೆಸಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತೆಲಂಗಾಣ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ರೆಡ್ಡಿಯವರು ಸುದ್ದಿಸಂಸ್ಥೆಗೆ ತಿಳಿಸಿದರು.
ರಾವ್ 1998ರಿಂದಲೂ ತೆಲಂಗಾಣ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿದ್ದರು
Next Story