Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಿಜಾನ್ ಲೋಪೆಝ್ ಎಂಬ ಸೋಲರಿಯದ ಮಹಾ ದೈತ್ಯ

ಮಿಜಾನ್ ಲೋಪೆಝ್ ಎಂಬ ಸೋಲರಿಯದ ಮಹಾ ದೈತ್ಯ

ದರ್ಶನ್ ಜೈನ್ದರ್ಶನ್ ಜೈನ್8 Aug 2024 10:36 AM IST
share
ಮಿಜಾನ್ ಲೋಪೆಝ್ ಎಂಬ ಸೋಲರಿಯದ ಮಹಾ ದೈತ್ಯ

ಮಿಜಾನ್ ಲೋಪೆಝ್ !

ಒಂದೇ ಕ್ರೀಡೆಯಲ್ಲಿ ಸತತವಾಗಿ ಐದು ಬಾರಿ ಒಲಿಂಪಿಕ್ಸ್ ಚಿನ್ನ ಗೆದ್ದ ಮೊದಲ ಕ್ರೀಡಾಪಟು!

ಇನ್ನು ಹದಿಮೂರು ದಿನಗಳಿಗೆ ತನ್ನ 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಮಿಜಾನ್, ಐದನೇ ಒಲಿಂಪಿಕ್ಸ್ ಚಿನ್ನ ಗೆಲ್ಲುವ ಮೂಲಕ ಕುಸ್ತಿಗೆ ವಿದಾಯ ಹೇಳಿದ್ದಾರೆ. ಕ್ಯೂಬಾ ದೇಶದ ಪಿನಾರ್ ದೆಲ್ ರಿಯೋ ಎಂಬ ಪುಟ್ಟ ಪಟ್ಟಣದಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿ ಪಟು ಮೈಕಲ್ ಲೋಪೆಝ್ ತಮ್ಮನಾಗಿ ಹುಟ್ಟಿದರು.

ಹೆರಾಡೂರದ ದೈತ್ಯ (ಜೈಂಟ್ ಆಫ್ ಹೆರಾಡೂರ), ದಿ ಟೆರಿಬಲ್ (ಎಲ್ ಟೆರಿಬಲ್ - ಭಯಾನಕ) ಎಂಬ ಎಲ್ಲಾ ವಿಶೇಷಣ - ಬಿರುದುಗಳಿಂದ ಬಣ್ಣಿಸಲ್ಪಡುವ ಮಿಜಾನ್ ಲೋಪೆಝ್, ಮೊತ್ತ ಮೊದಲಬಾರಿಗೆ 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಐದನೇ ಸ್ಥಾನ ಪಡೆಯುವ ಮೂಲಕ ಒಲಿಂಪಿಕ್ಸ್ ಅಭಿಯಾನ ಆರಂಭಿಸಿದರು. ಆಗ 22ನೇ ವಯಸ್ಸಿನ ಯುವ ಕುಸ್ತಿಪಟು ಆಗಿದ್ದ ಮಿಜಾನ್ ಲೋಪೆಝ್ ಪದಕ ಗೆಲ್ಲದಿದ್ದರೂ, ಘಟಾನುಘಟಿ ಕುಸ್ತಿಪಟುಗಳ ಗಮನಸೆಳೆದರು. ಮುಂದಿನ ಒಲಿಂಪಿಕ್ಸ್‌ನಲ್ಲಿ (2008-ಬೀಜಿಂಗ್) ಚಿನ್ನದ ಪದಕ ಗೆದ್ದ ಮಿಜಾನ್ ಆನಂತರ ತಿರುಗಿ ನೋಡಿದ್ದೇ ಇಲ್ಲ. 2012, 2016, 2020 ಮತ್ತು ಈಗ 2024ರಲ್ಲಿ ಚಿನ್ನದ ಪದಕವನ್ನು ಗೆದ್ದು ಈ ಸಾಧನೆ ಮಾಡಿರುವ ಏಕೈಕ ಕ್ರೀಡಾಪಟುವಾಗಿ ಇತಿಹಾಸ ನಿರ್ಮಿಸಿದರು.

2006, 2011, 2017ರ ವಿಶ್ವ ಚಾಂಪಿಯನ್‌ಶಿಪ್ ಫೈನಲ್ಸ್ ಸೋತಿದ್ದು ಬಿಟ್ಟರೆ, ಮಿಜಾನ್ ಅವರು ವಿಶ್ವಕಪ್, ವಿಶ್ವ ಚಾಂಪಿಯನ್‌ಷಿಪ್, ಪಾನ್ ಅಮೆರಿಕನ್ ಚಾಂಪಿಯನ್‌ಶಿಪ್‌ಗಳಲ್ಲಿ ಸೋಲರಿಯದ ಸರದಾರ.

ತನ್ನ ಫಾರ್ಮಿನ ಉತ್ತುಂಗದಲ್ಲಿ ಇರುವಾಗಲೇ, ಮುಂದಿನ ಪೀಳಿಗೆಯ ಆಟಗಾರರು ಮೆರೆಯಬೇಕು ಎಂದು ಕುಸ್ತಿ ತ್ಯಜಿಸಿದ್ದು ಶ್ಲಾಘನೀಯ ವಿಚಾರ.

ಕುಸ್ತಿಯ ವಿಚಾರಕ್ಕೆ ಬಂದಾಗ ಯಾರು ಸರ್ವಶ್ರೇಷ್ಠ ಕುಸ್ತಿಪಟು ಎನ್ನುವ ಚರ್ಚೆ ನಡೆದಾಗ ಕಡೆಯಲ್ಲಿ ಕಾಣಿಸಿಕೊಳ್ಳುವ ಹೆಸರುಗಳು ರಶ್ಯದ ಅಲೆಕ್ಸಾಂಡರ್ ಕೆರ್ಲಿನ್ ಮತ್ತು ಮಿಜಾನ್ ಲೋಪೆಝ್.

ಅಲೆಕ್ಸಾಂಡರ್ ಕೆರ್ಲಿನ್ ವಿವಿಧ ತಂಡಗಳನ್ನು ಪ್ರತಿನಿಧಿಸಿ ಸತತ ನಾಲ್ಕು ಒಲಿಂಪಿಕ್ಸ್ ಚಿನ್ನ ಗೆದ್ದವರು, ಹದಿಮೂರು ವರ್ಷ ಸತತವಾಗಿ ಸೋಲರಿಯದ ಸಾಹಸಿಯಾಗಿ ಮೆರೆದವರು; ತನ್ನ ಕಡೆಯ ಒಲಿಂಪಿಕ್ಸ್ ಫೈನಲ್‌ನಲ್ಲಿ ಅಮೆರಿಕದ ರುಲಾನ್ ಗಾರ್ಡ್‌ನರ್ ವಿರುದ್ಧ ಅಚ್ಚರಿಯಾಗಿ ಸೋತವರು. ಸೋತ ನಂತರ ಕುಸ್ತಿಗೆ ವಿದಾಯ ಹೇಳಿದವರು. ಈಗ ರಾಜಕಾರಣಿ, ಸಂಸದರಾಗಿದ್ದಾರೆ.

ಮಿಜಾನ್ ತನ್ನ ಸಣ್ಣ ವಯಸ್ಸಿನಿಂದಲೇ ಮಹಾ ಬಲಿಷ್ಠ ಕುಸ್ತಿಪಟುಗಳನ್ನು ಎದುರಿಸಿ, ಸೋಲಿಸಿ ತನ್ನ ಕುಸ್ತಿ ಜೀವನ ರೂಪಿಸಿಕೊಂಡವರು. ಎರಡು ದಶಕಗಳ ಕಾಲ, ಎರಡು ವಿಭಿನ್ನ ತಲೆಮಾರಿನ ಕುಸ್ತಿ ಪಟುಗಳನ್ನು ಎದುರಿಸಿ, ಸೋಲಿಸಿ, ಮೊದಲ ಶ್ರೇಣಿಯ ಕುಸ್ತಿಪಟುವಾಗಿ ಚಾಲ್ತಿಯಲ್ಲಿ ಇರುವುದು ನಿಜಕ್ಕೂ ಬಹಳ ದೊಡ್ಡ ಸಾಧನೆಯೇ!

ಅತ್ಯಂತ ಹೆಚ್ಚಿನ ದೈಹಿಕ ಸಾಮರ್ಥ್ಯ ಮತ್ತು ಕ್ಷಮತೆ ಬೇಡುವ ಸೂಪರ್ ಹೆವಿವೇಟ್ ವಿಭಾಗದಲ್ಲಿ ಇಪ್ಪತ್ತು ವರ್ಷಗಳ ಕಾಲ ಕುಸ್ತಿಯಲ್ಲಿ ರಾಜನಾಗಿ ಮೆರೆಯುವುದು ಸಾಮಾನ್ಯ ಸಂಗತಿಯಲ್ಲ! ಬಹುಶಃ ಇಷ್ಟೊಂದು ದೈಹಿಕ ಸಾಮರ್ಥ್ಯ ಮತ್ತು ಕ್ಷಮತೆ ಹೊಂದುವ ಕುಸ್ತಿಪಟುಗಳು ಇನ್ನು ಮುಂದೆ ಕಾಣಸಿಗುವುದು ಬಹಳ ಕಷ್ಟ. ಹಾಗಾಗಿ ಅಲೆಕ್ಸಾಂಡರ್ ಕೆರ್ಲಿನ್ ಮತ್ತು ಮಿಜಾನ್ ಲೋಪೆಝ್ ಇಬ್ಬರೂ ಶ್ರೇಷ್ಠರೇ.

ಮಿಜಾನ್ ಲೋಪೆಝ್ ಐದು ಒಲಿಂಪಿಕ್ಸ್ ಚಿನ್ನ, ಐದು ವಿಶ್ವ ಚಾಂಪಿಯನ್‌ಶಿಪ್, ಮೂರು ವಿಶ್ವ ಕಪ್ ಮತ್ತು ಒಂಭತ್ತು ಪಾನ್ ಅಮೆರಿಕನ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದರೂ ಅತ್ಯಂತ ವಿನೀತ ವರ್ತನೆಯಿಂದ ಮತ್ತು ಸರಳತೆಯಿಂದ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ.

ಇಪ್ಪತ್ತು ವರ್ಷಗಳ ಕಾಲ ಕುಸ್ತಿ ಜಗತ್ತು ಆಳಿದ ಮಹಾ ದೈತ್ಯ ಮಿಜಾನ್ ಲೋಪೆಝ್ ಅವರ ಮುಂದಿನ ಜೀವನ ಸುಖಕರವಾಗಿರಲಿ!

share
ದರ್ಶನ್ ಜೈನ್
ದರ್ಶನ್ ಜೈನ್
Next Story
X