ಲಿಂಗಸೂಗೂರು | ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

ರಾಯಚೂರು: ತಾಂತ್ರಿಕ ದೋಷದಿಂದಾಗಿ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಹೊರವಲಯ ಕರಿಗಾರ ಹೊಲದ ಹತ್ತಿರ ಇಂದು ನಡೆದಿದೆ.
ಮುದಗಲ್ ನ ಚಿಕ್ಕ ಲಕ್ಕಿಹಾಳದಿಂದ ಲಿಂಗಸುಗೂರು ಕಡೆ ಹೊರಟ ಬಸ್ ಮುದಗಲ್- ಲಿಂಗಸುಗೂರು ರಸ್ತೆಯಲ್ಲಿ ಕರಿಗಾರ ಹೊಲದ ಹತ್ತಿರ ಬಂದ ವೇಳೆ ಬಸ್ ನ ಎಕ್ಸ.ಎಲ್ ತುಂಡಾಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ.
ಬಸ್ಸಿನಲ್ಲಿ 33 ಸ್ತ್ರೀಯರು, 6 ಜನ ಪುರುಷರು, 30 ವಿದ್ಯಾರ್ಥಿಗಳು ಸಂಚರಿಸುತ್ತಿದ್ದರು. ಕೆಲವರಿಗೆ ಸಣ್ಣ ಪುಟ್ಟ ಗಾಯಗಾಳಗಿವೆ. ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಲಿಂಗಸೂಗೂರು ಮಾರ್ಗವಾಗಿ ಸಂಚರಿಸುವ ಅನೇಕ ಸರ್ಕಾರಿ ಬಸ್ ಗಳು ಹಳೆಯದ್ದಾಗಿದ್ದರಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
Next Story