ದ್ವಿತೀಯ ಪಿಯು ಪರೀಕ್ಷೆ | ರಾಯಚೂರಿನಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ, ಸಿಹಿಹಂಚಿ ಸ್ವಾಗತ

ರಾಯಚೂರು: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆಯ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಎಸ್.ಆರ್.ಪಿ.ಎಸ್. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಸಿಹಿ ಹಂಚಿ ಸ್ವಾಗತಿಸಲಾಯಿತು.
ಎಸ್.ಆರ್.ಪಿ.ಎಸ್ ಪಿಯುಸಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀರಾಮ್ ಬೂಬ್ , ಪ್ರಾಂಶುಪಾಲ ರಾಘಮ್ಮ ಹಾಗೂ ಪರೀಕ್ಷಾ ಮುಖ್ಯಸ್ಥ ವೀರೇಶ್ ಸೆರೆಗಾರ್ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಚಾಕಲೇಟ್ ಹಂಚಿ, ಯಾವುದೇ ಕಾರಣಕ್ಕೆ ಪರೀಕ್ಷೆಯಲ್ಲಿ ಭಯ ಬೀಳದೇ ಸಂಭ್ರಮದಿಂದ ಎದುರಿಸಿ ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪ್ರಿಯಾಂಕಾ, ಸಿದ್ಧಲಿಂಗ, ಮಲ್ಲೇಶ್, ಕೆ.ವೀರೇಶ್ ಕುಮಾರ್, ಗೀತಾ, ಭೋದಕೇತರ ಸಿಬ್ಬಂದಿಯಾದ ಅನುರಾಜ್, ವಿಶಾಲ್, ರಘು, ಅಜಯ್, ಶ್ರೀನಿವಾಸ, ಪದ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.
Next Story