ರಾಯಚೂರು | ಹದಿಹರೆಯದವರ ಸಮಸ್ಯೆಗಳಿಗೆ ಜಾಗೃತಿ ಕೇಂದ್ರ ಆರಂಭ : ಡಾ.ಬಾಲಸುಬ್ರಮಣ್ಯಮ್

ರಾಯಚೂರು : ಹದಿ ಹರೆಯದವರ ಸಮಸ್ಯೆಗಳು ಮತ್ತು ಪರಿಹಾರಕ್ಕಾಗಿ ಎಂ.ಕೆ.ಭಂಡಾರಿ ಆಸ್ಪತ್ರೆಯಲ್ಲಿ ಜಾಗೃತಿ ಹಾಗೂ ಸಲಹಾ ಕೇಂದ್ರವನ್ನು ಆರಂಭಿಸಲಾಗಿದ್ದು, ನಾಳೆಯಿಂದ ಕಾರ್ಯರಂಭವಾಗಲಿದೆ ಎಂದು ರಿಮ್ಸ್ ವೈದ್ಯಕೀಯ ಮಕ್ಕಳ ತಜ್ಞ ಡಾ.ಬಾಲಸುಬ್ರಮಣ್ಯಮ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ಹದಿ ಹರೆಯದವರು ನಮ್ಮ ಭವಿಷ್ಯದ ಜನತೆಯಾಗಿದ್ದು,ಅವರ ಆರೋಗ್ಯ ಕಾಪಾಡುವ ಜವಾಬ್ದಾರಿ ಎಲ್ಲಾರ ಮೇಲಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಸಮಾಜದಲ್ಲಿನ ಹದಿ ಹರೆಯದವರ ಸಮಸ್ಯೆ ಮತ್ತು ಪರಿಹಾರಗಳ ಕುರಿತು ಮಾಹಿತಿ ನೀಡಲಾಗುವುದೆಂದರು.
10 ರಿಂದ 19 ವಯಸ್ಸಿನ ಮಕ್ಕಳು ಕೋಪ, ಅಸಹನೆ ವ್ಯಕ್ತಪಡಿಸುವುದು ಸಹಜ. ಯಸ್ರೋಜಿನ್ ಉತ್ಪಾದನೆಯಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಸಮಸ್ಯೆ ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಜಾಗೃತಿ ಮೂಡಿಲಿಸಿದ್ದೆವೆ ಎಂದು ತಿಳಿಸಿದರು.
ಮಕ್ಕಳ ಬೆಳವಣಿಯಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮುಖ್ಯವಾಗಿರುತ್ತದೆ. ಅದಲ್ಲದೇ ಮಕ್ಕಳು ಓದುವ ವಿಚಾರದಲ್ಲಿ ಖಿನ್ನತೆಗೆ ಒಳಗಾಗದ ಮಾನಸಿಕವಾಗಿ, ದೈಹಿಕವಾಗಿ ಕುಗ್ಗುವಿಕೆ ಸಾಧ್ಯತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಹದಿ ಹರೆಯದ ವಯಸ್ಸಿನ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಹದಿ ಹರೆಯದ ವಯಸ್ಸಿನ ಮಕ್ಕಳು ಪಾಲ್ಗೊಳ್ಳುಬೇಕು ಎಂದು ಮನವಿ ಮಾಡಿದರು. ಭಂಡಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಿಯಾಜುದ್ದೀನ್, ಮಕ್ಕಳ ತಜ್ಞ ಡಾ.ಚೈತ್ರ ಉಪಸ್ಥಿತರಿದ್ದರು