Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಚಿತ್ರ ವಿಮರ್ಶೆ
  5. ಕಾಡು-ನಾಡಿನ ಸಂಘರ್ಷದ ಹಾಲಾಹಲ...

ಕಾಡು-ನಾಡಿನ ಸಂಘರ್ಷದ ಹಾಲಾಹಲ ‘ಕಾಲಾಪಾನಿ’

ಮುಸಾಫಿರ್ಮುಸಾಫಿರ್22 Oct 2023 11:48 AM IST
share
ಕಾಡು-ನಾಡಿನ ಸಂಘರ್ಷದ ಹಾಲಾಹಲ ‘ಕಾಲಾಪಾನಿ’

‘ಕಾಲಾ ಪಾನಿ’ ಎಂದಾಗ ತಕ್ಷಣ ಸ್ಮತಿ ಪಟಲದೆದುರು ಬ್ರಿಟಿಷರ ಕಾಲದ ‘ಕಪ್ಪು ನೀರಿನ ಶಿಕ್ಷೆ’ ಬಂದು ನಿಲ್ಲುತ್ತದೆ. ಜೊತೆ ಜೊತೆಗೇ ಪ್ರಿಯದರ್ಶನ್ ನಿರ್ದೇಶನದ, ಮೋಹನ್‌ಲಾಲ್ ಅಭಿನಯದ ‘ಕಾಲಾಪಾನಿ’ ಚಿತ್ರದ ತುಣುಕುಗಳೂ ಸರಿದು ಹೋಗುತ್ತವೆ. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ‘ಕಾಲಾಪಾನಿ’ ಮತ್ತೆ ಹೊಸದಾಗಿ ಹರಿದಿದೆ. ಅದೇ ಅಂಡಮಾನ್-ನಿಕೋಬಾರ್, ದಟ್ಟಕಾಡು, ಸುತ್ತುವರಿದ ನೀರು....ಇಡೀ ದ್ವೀಪವೇ ಜೈಲಾಗಿ ಪರಿವರ್ತನೆಗೊಂಡು ಇವುಗಳ ಮಧ್ಯೆ ದಿಗ್ಬಂಧನಕ್ಕೊಳಗಾದ ಲಕ್ಷಾಂತರ ಜನರು! ಸಮೀರ್ ಸಕ್ಸೇನಾ, ಅಮಿತ್ ಗೊಲಾನಿ ನಿರ್ದೇಶನದ ‘ಕಾಲಾಪಾನಿ’ ಸರಣಿ ಏಳು ಕಂತುಗಳನ್ನು ಒಳಗೊಂಡ ಥ್ರಿಲ್ಲರ್ ಕಥಾನಕ. ಕಾಡು-ಮನುಷ್ಯ, ನಾಗರಿಕತೆ-ಪ್ರಕೃತಿ, ನೀರು-ಭೂಮಿ, ಹಣ-ಮನುಷ್ಯತ್ವ ಇವುಗಳ ನಡುವಿನ ಸಂಘರ್ಷವನ್ನು ಈ ಏಳು ಕಂತುಗಳು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ.

ಅಂಡಮಾನ್ ನಿಕೋಬಾರ್ ಕುಖ್ಯಾತವಾಗಿರುವುದು ಅಲ್ಲಿನ ಪೋರ್ಟ್ ಬ್ಲೇರ್ ಜೈಲಿಗಾಗಿ. ಆದರೆ ಈ ಸರಣಿಯಲ್ಲಿ ನಿಗೂಢ ಸಾಂಕ್ರಾಮಿಕ ಕಾಯಿಲೆಯೊಂದು ಇಡೀ ದ್ವೀಪವನ್ನೇ ಜೈಲಾಗಿ ಪರಿವರ್ತಿಸುತ್ತದೆ. ಸಂಪೂರ್ಣ ದ್ವೀಪವನ್ನೇ ಸರಕಾರ ದಿಗ್ಬಂಧನದಲ್ಲಿಡುತ್ತದೆ. ಕಾರ್ಪೊರೇಟ್ ಉತ್ಸವದಲ್ಲಿ ಭಾಗಿಯಾಗಲು ಬಂದ ಸಾವಿರಾರು ಪ್ರವಾಸಿಗರು ಈ ದಿಗ್ಬಂಧನದಿಂದ ಪಾರಾಗಲು ನಡೆಸುವ ಹೋರಾಟವನ್ನು ಸರಣಿ ತೆರೆದಿಡುತ್ತಾ ಹೋಗುತ್ತದೆ. ಸರಣಿ ನೀರನ್ನು ಕೇಂದ್ರವಾಗಿಟ್ಟುಕೊಂಡಿದೆ. ಎಲ್ಲ ದಿಕ್ಕಿನಿಂದ ಆವರಿಸಿರುವ ನೀರು ಈ ದ್ವೀಪವೆಂಬ ಜೈಲಿನ ಮಹಾಗೋಡೆ. ಇದೇ ಸಂದರ್ಭದಲ್ಲಿ ದ್ವೀಪದ ಒಳಗೂ ನೀರು ಎನ್ನುವುದು ‘ಕಾಲ್-ಮೃತ್ಯು’ವಾಗಿ ಬದಲಾಗುತ್ತದೆ. ಕುಡಿಯುವ ನೀರೇ ಕಾಯಿಲೆ ಹರಡುವ ವಿಷವಾಗಿ ಪರಿವರ್ತನೆಗೊಂಡಿರುತ್ತದೆ. ನೀರಿನ ಮಧ್ಯದಲ್ಲೂ ನೀರಿಲ್ಲದೆ ಒದ್ದಾಡುವ ಸ್ಥಿತಿ. ಮನುಷ್ಯ ಸಂಬಂಧಗಳಿಗೆ ಪರೀಕ್ಷೆಯ ಕಾಲ. ಡಾ. ಸೌಧಾಮಿನಿ ಸಿಂಗ್(ಮೋನಾ ಸಿಂಗ್)ನಿಂದ ಬಿಚ್ಚಿಕೊಳ್ಳುವ ಕಾಯಿಲೆಯ ರಹಸ್ಯ ಸ್ವಾತಂತ್ರ್ಯ ಪೂರ್ವದ ಕಾಲದಿಂದ ಇಂದಿನ ವರೆಗಿನ ದ್ವೀಪದೊಳಗಿರುವ ಹತ್ತುಹಲವು ಸಂಘರ್ಷಗಳ ಘಟ್ಟಗಳನ್ನು ಹೇಳುತ್ತದೆ. ನಾಗರಿಕರು ಎನಿಸಿಕೊಂಡ ಜನರು ಇಲ್ಲಿನ ಕಾಡು ಮತ್ತು ಆದಿವಾಸಿಗಳ ಮೇಲೆ ನಡೆಸಿದ ಕ್ರೌರ್ಯಗಳನ್ನು ಜೊತೆ ಜೊತೆಯಾಗಿ ಬಿಚ್ಚಿಡುತ್ತದೆ.

ಲೆಫ್ಟಿನೆಂಟ್ ಜನರಲ್ ಝಿಬ್ರಾನ್ ಖಾದ್ರಿ(ಅಶುತೋಶ್ ಗೋವಾರಿಕರ್) ಯ ನೇತೃತ್ವದಲ್ಲಿ ವೈರಸ್ ವಿರುದ್ಧ ಆಡಳಿತ ಯುದ್ಧಕ್ಕಿಳಿದರೆ, ಬೇರೆ ಬೇರೆ ಜೋಡಿಗಳು ತಮ್ಮ ಜೀವವನ್ನು ಉಳಿಸಿಕೊಳ್ಳುವುದರ ಜೊತೆಗೆ ಬದುಕನ್ನು, ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತವೆ. ಹಲವರು ವಿಫಲರಾಗಿ ಜೀವತೆರಬೇಕಾಗುತ್ತದೆ. ಕೆಲವರು ಈ ಪರೀಕ್ಷೆಯಲ್ಲಿ ಗೆಲ್ಲುತ್ತಾರೆ. ವೈರಸ್‌ನಷ್ಟೇ ವಿಷಕಾರಿಯಾಗಿರುವ ಭ್ರಷ್ಟಾಚಾರ, ಮನುಷ್ಯನ ಲಾಭಬಡುಕತನ ಇವೆಲ್ಲದರ ದುರಂತಗಳನ್ನು ಸರಣಿ ವೇಗವಾಗಿ ನಿರೂಪಿಸುತ್ತಾ ಸಾಗುತ್ತದೆ. ಮಾಡದ ತಪ್ಪಿಗಾಗಿ ಅಂಡಮಾನ್ ನಿಕೋಬಾರ್‌ನಲ್ಲಿ ಸಿಲುಕಿಕೊಳ್ಳುವ ಎಸಿಪಿ ಖೇತನ್ ಇಲ್ಲಿಂದ ಪಾರಾಗುವುದಕ್ಕಾಗಿಯೇ ಕಾರ್ಪೊರೇಟ್ ವ್ಯವಸ್ಥೆಯೊಂದಿಗೆ ಕೈ ಜೋಡಿಸಿಕೊಂಡವನು. ಬಾಲ್ಯದಿಂದಲೇ ನರ್ಸ್ ಆಗುವ ಕನಸು ಕಂಡ ಜ್ಯೋತ್ಸ್ನಾ ಡೇ ಆ ಭಗ್ನ ಕನಸುಗಳಿಂದ ಜರ್ಜರಿತಳಾಗಿ ಕೆಲವು ದಿನಗಳಿಗಾಗಿ ದ್ವೀಪಕ್ಕೆ ಬಂದವಳು, ತನ್ನ ಭೂತ-ವರ್ತಮಾನದ ನಡುವೆ ಸಿಲುಕಿಕೊಂಡಿ ರುವವಳು. ದುರ್ಬಲ ಮನಸ್ಸಿನ ತಂದೆ ಸಂತೋಷ್ ಪ್ರೀತಿ ಪಾತ್ರ ಪತ್ನಿಯನ್ನು ಕಳೆದುಕೊಂಡು, ಕೈ ತಪ್ಪಿದ ಮಕ್ಕಳಿಗಾಗಿ ದ್ವೀಪದಲ್ಲಿ ಅಲೆದಾಡುತ್ತಿರುವವನು. ಹೀಗೆ ತಂದೆ-ಮಗ, ಪತಿ-ಪತ್ನಿ, ಗೆಳೆಯ-ಗೆಳತಿ ಮೊದಲಾದ ಸಂಬಂಧಗಳ ಗಟ್ಟಿತನವನ್ನು ‘ಕಾಲಾಪಾನಿ’ ನಿಕಷಕ್ಕೆ ಒಡ್ಡುತ್ತಾ ಹೋಗುತ್ತದೆ.

ಆಧುನಿಕ ಲಾಲಸೆಯ ಬದುಕಿನಲ್ಲಿ ಮೈಮರೆತಿರುವ ನಾವೆಲ್ಲರೂ ಒಂದಲ್ಲ ಒಂದು ದಿನ ಈ ‘ಕಾಲಾಪಾನಿ’ಯ ದಿಗ್ಬಂಧನಕ್ಕೆ ಒಳಗಾಗುವ ಅಪಾಯದ ಕುರಿತಂತೆ ಸರಣಿ ಎಚ್ಚರಿಸುತ್ತದೆ. ಮನುಷ್ಯನ ಎಲ್ಲ ಸ್ವಾರ್ಥಗಳ ಮೇಲೆ ಪ್ರಕೃತಿ ಕಟ್ಟಕಡೆಗೆ ಜಯ ಸಾಧಿಸಿಯೇ ಸಾಧಿಸುತ್ತದೆ ಎನ್ನುವುದನ್ನೂ ಘೋಷಿಸುತ್ತದೆ. ಅಂಡಮಾನ್ ನಿಕೋಬಾರ್ ದ್ವೀಪದ ರುದ್ರರಮಣೀಯತೆಯನ್ನು ಕಟ್ಟಿಕೊಡುವಲ್ಲಿ ಛಾಯಾಗ್ರಹಣ ಯಶಸ್ವಿಯಾಗಿದೆ. ಕಾಡಿನ ನಿಗೂಢತೆ, ಮನುಷ್ಯನ ಆತಂಕ, ಭಯಗಳನ್ನು ಹಿಡಿದಿಡುವ ಸಂಗೀತ ಸರಣಿಯ ಲಯತಪ್ಪದಂತೆ ನೋಡಿಕೊಂಡಿದೆ.

share
ಮುಸಾಫಿರ್
ಮುಸಾಫಿರ್
Next Story
X