Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಅಮ್ಮಾ... ನನ್ನ ಹೆಸರು ಬರೆದಿಡು

ಅಮ್ಮಾ... ನನ್ನ ಹೆಸರು ಬರೆದಿಡು

ಝೆಯ್ನಾ ಅಝ್ಝಮ್ಝೆಯ್ನಾ ಅಝ್ಝಮ್ಹುಸ್ನ ಖದೀಜಹುಸ್ನ ಖದೀಜ28 Nov 2023 11:03 AM IST
share
ಅಮ್ಮಾ... ನನ್ನ ಹೆಸರು ಬರೆದಿಡು

ಝೆಯ್ನಾ ಅಝ್ಝಮ್

ಕನ್ನಡಕ್ಕೆ: ಹುಸ್ನ ಖದೀಜ

ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು

ಆ ಕಪ್ಪು ಪರ್ಮನೆಂಟ್ ಮಾರ್ಕರ್ ಪೆನ್ನಲ್ಲೇ ನನ್ನ ಹೆಸರು ಬರೆದಿಡು

ಒದ್ದೆಯಾದರೂ ಅದರ ಇಂಕು ಹರಡುವುದಿಲ್ಲ

ಬೆಂಕಿ ತಾಗಿದಾಗ ಅದರಲ್ಲಿ ಬರೆದಿದ್ದು ಕರಗಿ ಹೋಗುವುದಿಲ್ಲ


ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು

ಆದಷ್ಟು ಸ್ಪಷ್ಟವಾಗಿ, ದಪ್ಪವಾಗಿ ನನ್ನ ಹೆಸರು ಬರೆದಿಡು

ನನ್ನ ಹೆಸರು ಬರೆವಾಗ ಅದಕ್ಕೆ ನಿನ್ನ ಅಲಂಕಾರವನ್ನೂ ಸೇರಿಸು

ನಾನು ನಿದ್ದೆಗೆ ಜಾರುವಾಗ ನಿನ್ನ ಕೈಬರಹ ನೋಡಿ ಸಮಾಧಾನವಾಗುತ್ತೇನೆ

ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು

ನನ್ನ ತಮ್ಮಂದಿರು, ತಂಗಿಯಂದಿರ ಕಾಲಲ್ಲೂ ಅವರ ಹೆಸರು ಬರೆದಿಡು

ಆ ರೀತಿ ನಾವೆಲ್ಲರೂ ಒಂದಾಗಿರುತ್ತೇವೆ

ಆ ರೀತಿ ನಾವೆಲ್ಲರೂ ನಿನ್ನ ಮಕ್ಕಳಾಗಿ ಗುರುತಿಸಲ್ಪಡುತ್ತೇವೆ

ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು

ನಿನ್ನ ಮತ್ತು ಅಪ್ಪನ ಕಾಲಲ್ಲೂ ನಿಮ್ಮ ಹೆಸರನ್ನು ಬರೆದಿಡು

ನಮ್ಮೆಲ್ಲರನ್ನೂ ಒಂದೇ ಕುಟುಂಬವಾಗಿ ನೆನಪಿಸಲಿ

ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು

ಯಾವುದೇ ಸಂಖ್ಯೆಯನ್ನು ಬರೆದಿಡಬೇಡ

ನನ್ನ ಹುಟ್ಟಿದ ದಿನ, ಮನೆಯ ಸಂಖ್ಯೆ ಬರೆಯಬೇಡ

ಈ ಜಗತ್ತು ನನ್ನನ್ನು ಇನ್ನೊಂದು ಸಂಖ್ಯೆಯಾಗಿ ಪಟ್ಟಿ ಮಾಡೋದು ಬೇಡ

ನನಗೊಂದು ಹೆಸರಿದೆ, ನಾನೊಂದು ಸಂಖ್ಯೆ ಅಲ್ಲ

ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು

ನಮ್ಮ ಮನೆ ಮೇಲೆ ಬಾಂಬು ಬಿದ್ದಾಗ

ಮನೆಯ ಗೋಡೆಗಳು ನಮ್ಮ ಬುರುಡೆಯನ್ನೂ,

ಮೂಳೆಗಳನ್ನೂ ಪುಡಿಪುಡಿ ಮಾಡಿದಾಗ

ನಮಗೆ ಓಡಿ ಹೋಗಲು ಸ್ಥಳವೇ ಇರಲಿಲ್ಲ ಎಂದು

ನಮ್ಮ ಕಾಲುಗಳು ನಮ್ಮ ಕತೆ ಹೇಳಲಿವೆ

(ಗಾಝಾದಲ್ಲಿ ಇಸ್ರೇಲ್ ದಾಳಿಯಿಂದ ತಾವು ಅಥವಾ ತಮ್ಮ ಮಕ್ಕಳು ಕೊಲ್ಲಲ್ಪಟ್ಟರೆ ಗುರುತು ಸಿಗಲು ಹೆತ್ತವರು ತಮ್ಮ ಮಕ್ಕಳ ಕಾಲಿನ ಮೇಲೆ ಅವರ ಹೆಸರು ಬರೆದಿಡಲು ಪ್ರಾರಂಭಿಸಿದಾಗ ಬರೆದ ಸಾಲುಗಳು)

share
ಝೆಯ್ನಾ ಅಝ್ಝಮ್
ಝೆಯ್ನಾ ಅಝ್ಝಮ್
ಹುಸ್ನ ಖದೀಜ
ಹುಸ್ನ ಖದೀಜ
Next Story
X