ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಕಾರ್ಕಳ, ಸೆ.11: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಕುಕ್ಕುಂದೂರು ಗ್ರಾಮದ ಮಾದ್ಯಾಕಾರ್ ನಿವಾಸಿ ಸತೀಶ ಆಚಾರ್ಯ(49)ಎಂಬವರು ಸೆ.10ರಂದು ಸಂಜೆ ಮನೆಯ ಬಳಿಯ ಹಳೆಯ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಬ್ಯಾಂಕ್ ಮತ್ತು ಇತರರಲ್ಲಿ ಮಾಡಿರುವ ಸಾಲದ ಹಣವನ್ನು ವಾಪಾಸು ಕಟ್ಟಲಾಗದೆ ಮಾನಸಿಕ ಖಿನ್ನತೆಗೆ ಒಳಗಾದ ನಾಡ್ಪಾಲು ಗ್ರಾಮದ ಹಕ್ಕರ್ಕೆ ಸೋಮೇಶ್ವರ ನಿವಾಸಿ ವಿಜೇಂದ್ರ ನಾಯ್ಕ(38) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.11ರಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story