ನಿವೇಶನ ರಹಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ
ಉಡುಪಿ, ಫೆ.13: ಉಡುಪಿ ನಗರಸಭೆ ವ್ಯಾಪ್ತಿಯ ಹೆರ್ಗ ವಸತಿ ಸಮುಚ್ಛಯ ದಲ್ಲಿರುವ ನಿವೇಶನ ರಹಿತರ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ನಿಗಮ ಪ್ರಧಾನ ಮಂತ್ರಿ ಅವಾಸ್ ಯೋಜನೆ(ನಗರ)ಯಡಿಯಲ್ಲಿ ಸುಸಜ್ಜಿತ ವಸತಿ ಸಮು ಚ್ಛಯ ಕಾಮಗಾರಿ ಬಹುತೇಕ ಸಂಪೂರ್ಣಗೊಂಡಿದ್ದು, ಈಗಾಗಲೇ ಹಲವಾರು ಬಡ ಕುಟುಂಬ ಗಳು ಮನೆಗಳನ್ನು ಸುಪರ್ದಿಗೆ ಪಡೆದು ವಾಸವಾಗುವ ಸಿದ್ಧತೆಯಲ್ಲಿದ್ದು, ಇದೀಗ ಮನೆಗೆ ಸಹಾಯಧನದೊಂದಿಗೆ ಅಂಶಿಕ ಸಾಲ ಮಂಜೂರಾಗದೆ ನಿವೇಶನ ರಹಿತರ ತೊಂದರೆ ಅನುಭವಿಸುವಂತಾಗಿದೆಂದು ಮನವಿಯಲ್ಲಿ ದೂರಲಾಗಿದೆ.
ಕಳೆದ 2 ವರ್ಷಗಳ ಹಿಂದೆ ಮನೆ ಸಾಲ ಮಂಜೂರಾಗಿದ್ದರೂ ಫಲಾನುಭವಿ ಅರ್ಜಿದಾರನಿಗೆ ಯಾವುದೇ ಮಾಹಿತಿ ನೀಡದ ಕಾರಣ ನಿವೇಶನ ರಹಿತ ಬಡ ಕುಟುಂಬಗಳಿಗೆ ಅನ್ಯಾಯ ಮಾಡಲಾಗಿದೆ. ವಸತಿಗಾಗಿ ಅರ್ಜಿ ಸಲ್ಲಿಸಿದ ಬಡ ನಿವೇಶನ ರಹಿತರಿಗೆ ಸಾಲ ಮಂಜೂರು ಮಾಡಲು ಸೂಕ್ತ ಪೂರಕ ದಾಖಲೆ ಗಳನ್ನು ಒದಗಿಸಲಾಗಿದ್ದರೂ ಯಾವ ಪ್ರತಿಕ್ರಿಯೆ ನೀಡದ ಕ್ರಮವನ್ನು ಖಂಡನೀಯ. ಆದುದರಿಂದ ಇವರಿಗೆ ನ್ಯಾಯ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡರಾದ ವೆಂಕಟೇಶ್ ಕೋಣಿ, ಚನ್ನಪ್ಪವೀರೇಶನವರ್, ನಾಗಪ್ಪ ಮಣಿಪಾಲ್, ಪ್ರವೀಣ್, ಭವಾನಿ, ಪುರುಷೋತ್ತಮ ಶೆಟ್ಟಿಗಾರ್ ಮಲ್ಪೆ, ಜಯಲಕ್ಷ್ಮಿ, ನಾಗರಾಜ ಮಲ್ಯ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು.