ಬಿವಿಟಿಯಲ್ಲಿ ಹಿರಿಯ ನಾಗರಿಕರ ‘ಸಾರ್ಥಕ ವಸಂತ’ ಸಮಾವೇಶ
ಉಡುಪಿ, ಮೇ15: ಮಣಿಪಾಲ ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟ್ ಆಶ್ರಯದಲ್ಲಿ ಮೇ 30ರ ಗುರುವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಮಣಿಪಾಲದ ಮಹಾನ್ ಚೇತನಗಳಾದ ಡಾ.ಟಿ.ಎಂ.ಎ.ಪೈ ಹಾಗೂ ಟಿ.ಎ.ಪೈ ಅವರ ಸಂಸ್ಮರಣೆಯಲ್ಲಿ ಹಿರಿಯ ನಾಗರಿಕರ ಸಮಾವೇಶ ‘ಸಾರ್ಥಕ ವಸಂತ’ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನ ಸಭಾಂಗಣದಲ್ಲಿ ನಡೆಯಲಿದೆ.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಮತ್ತು ಮೈಸೂರಿನ ಫೋಕಸ್ ಅಕಾಡೆಮಿಯ ಸ್ಥಾಪಕ ಡಿ.ಟಿ ರಾಮಾನುಜ ಅವರು ‘ಎರಡನೇ ಇನಿಂಗ್ಸ್ ಸಾರ್ಥಕ ವಸಂತ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದು ಬಳಿಕ ಹಿರಿಯ ನಾಗರಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಹಿರಿಯ ನಾಗರಿಕರು ದೂರವಾಣಿ ಸಂಖ್ಯೆ: 9482773764 / 8970891031ನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿ ಕೊಳ್ಳುವಂತೆ ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. ನೊಂದಣಿ ಮಾಡಿದ ಮೊದಲ 50 ಜನರಿಗೆ ಮಾತ್ರ ಆದ್ಯತೆ ನೀಡಲಾಗುವುದು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.
Next Story