ಉಡುಪಿ: ರಾಗಧನದಿಂದ ಸಂಗೀತ ಕಾರ್ಯಾಗಾರ
ಉಡುಪಿ, ಮೇ16: ಉಡುಪಿಯ ರಾಗ ಧನ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮೇ 21 ಹಾಗೂ 22ರಂದು ಮಣಿಪಾಲದ ಅಲೆವೂರು ರಸ್ತೆಯಲ್ಲಿರುವ ಮಣಿಪಾಲ್ ಡಾಟ್ನೆಟ್ ಸಭಾಂಗಣದಲ್ಲಿ ಚೆನ್ನೈನ ವಿದ್ವಾನ್ ಜಿ. ರವಿಕಿರಣ್ ಇವರಿಂದ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಸಂಗೀತ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಮೇ 21ರಂದು ಅಪರಾಹ್ನ 2:30ಕ್ಕೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಕಾರ್ಯ ಕ್ರಮವನ್ನು ಉದ್ಘಾಟಿಸಲಿದ್ದಾರೆ. ಮರುದಿನ 22ರಂದು ಅಪರಾಹ್ನ 2:00ರಿಂದ ಶಿಬಿರಾರ್ಥಿಗಳಿಂದ ಕೃತಿಗಳ ಪ್ರಸ್ತುತಿ ನಡೆಯಲಿದೆ. ಸಂಜೆ 4:15ಕ್ಕೆ ಸಮಾರೋಪ ಸಮಾರಂಭ ಹಾಗೂ 5:00ರಿಂದ ಜಿ. ರವಿಕಿರಣ ಚೆನೈ ಇವರ ಹಾಡುಗಾರಿಕೆ ನಡೆಯಲಿದೆ. ಇವರಿಗೆ ಎಡಪ್ಪಳ್ಳಿ ಅಜಿತ್ ಕುಮಾರ್ ವಯೊಲಿನ್ ಹಾಗೂ ನಿಕ್ಷಿತ್ ಟಿ. ಪುತ್ತೂರು ಮೃದಂಗದಲ್ಲಿ ಸಹಕರಿಸಲಿದ್ದಾರೆ.
ಇದಕ್ಕೆ ಪೂರ್ವಭಾವಿಯಾಗಿ ಬಾಲಕಿಯರಾದ ಪ್ರಣತಿ ಎಸ್.ಭಟ್ ಹಾಗೂ ಧೃತಿ ಎಸ್. ಭಟ್ ವರಿಂದ ದ್ವಂದ್ವ ಹಾಡುಗಾರಿಕೆ ನಡೆಯಲಿದೆ ಎಂದು ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ.ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಮೊಬೈಲ್ ನಂ.:9964140601ಕ್ಕೆ ಕರೆ ಮಾಡಿ ಹೆಸರು ನೊಂದಾಯಿಸುವಂತೆ ಅವರು ವಿನಂತಿಸಿದ್ದಾರೆ.