ವಿಶ್ವ ಸಾಗರ ದಿನಾಚರಣೆ: ಮರವಂತೆ ಕಡಲ ತೀರ ಸ್ವಚ್ಚತೆ
ಕುಂದಾಪುರ: ಎಚ್.ಸಿ.ಎಲ್ ಫೌಂಡೇಶನ್, ಮತ್ತು ರೀಫ್ ವಾಚ್ ಸಂಸ್ಥೆ ಸಹಭಾಗಿತ್ವದಲ್ಲಿ ಮರವಂತೆ ಗ್ರಾಮ ಪಂಚಾ ಯತ್, ತ್ರಾಸಿ ಕ್ಲೀನ್ ಕಿನಾರ, ಕರಾವಳಿ ಪೊಲೀಸ್ ಕಾವಲು ಪಡೆ, ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಮರವಂತೆ, ಸಮೃದ್ಧ ಬೈಂದೂರು ಕ್ಲೀನ್ ಕಿನಾರ ಇವುಗಳ ಸಹಯೋಗದೊಂದಿಗೆ ವಿಶ್ವ ಸಾಗರ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಮರವಂತೆ ಕಡಲ ತೀರವನ್ನು ಸ್ವಚ್ಚಗೊಳಿಸಲಾಯಿತು.
ಮರವಂತೆ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಎಸ್.ಜನಾರ್ದನ್ ಮರವಂತೆ ಸ್ವಚತೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ರೀಫ್ ವಾಚ್ ಸಂಸ್ಥೆಯ ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು.
Next Story