ಮರದಿಂದ ಬಿದ್ದು ಯುವಕ ಮೃತ್ಯು
ಹೆಬ್ರಿ, ಜು.3: ಸೊಪ್ಪು ಕಡಿಯುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಜು.2ರಂದು ಮಧ್ಯಾಹ್ನ ವೇಳೆ ಮುದ್ರಾಡಿ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ಬೈರಂಪಳ್ಳಿ ಗ್ರಾಮದ ಗೋಪಾಲ(32) ಎಂದು ಗುರುತಿಸ ಲಾಗಿದೆ. ಇವರು ಅಡಿಕೆ ಮರದ ಬುಡಕ್ಕೆ ಸೊಪ್ಪನ್ನು ಹಾಕಲು ಮಾವಿನ ಮರವನ್ನು ಹತ್ತಿ ಸೊಪ್ಪನ್ನು ಕೊಯ್ಯುತ್ತಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯ ಗೊಂಡಿದ್ದ ಅವರು, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story