ಕುಂದಾಪುರ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ
ಕುಂದಾಪುರ, ಸೆ.19: ಕೆಲಸವಿಲ್ಲದ ಚಿಂತೆಯಲ್ಲಿ ಯುವಕ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಪ್ತಿ ಗ್ರಾಮದಿಂದ ವರದಿಯಾಗಿದೆ.
ಮೃತರನ್ನು ಉಡುಪಿ ಕೃಷ್ಣರಾಜ್ (31) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ದಲ್ಲಿದ್ದ ಇವರು ಆರು ತಿಂಗಳ ಹಿಂದೆ ಕೆಲಸವಿಲ್ಲದೇ ಊರಿಗೆ ಬಂದಿದ್ದರು. ಇದರಿಂದ ಮಾನಸಿಕವಾಗಿ ನೊಂದು ಈ ಕೃತ್ಯ ಎಸಗಿರಬೇಕೆಂದು ಹೇಳಲಾಗಿದೆ.
ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story