ಮಾವಿನಕಟ್ಟೆ ಸಿಪಿಎಂ ಶಾಖಾ ಸಮ್ಮೇಳನ
ಕುಂದಾಪುರ, ಅ.4: ಉಡುಪಿ ಜಿಲ್ಲೆಯ ಮಾವಿನಕಟ್ಟೆ ಸಿಪಿಎಂ ಶಾಖಾ ಸಮ್ಮೇಳನ ಇಂದು ಮಾವಿನ ಕಟ್ಟೆ ಅಬ್ಬಿಗುಡ್ಡಿಯಲ್ಲಿ ಜರುಗಿತು. ಸಮ್ಮೇಳನದ ಧ್ವಜಾರೋಹಣವನ್ನು ಪಕ್ಷದ ಹಿರಿಯ ಸದಸ್ಯ ಬಾಬು ಎಸ್ ನೆರವೇರಿಸಿದರು.
ಸಮ್ಮೇಳನವನ್ನು ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಜಿ.ಡಿ ಪಂಜು ಪೂಜಾರಿ ಉದ್ಘಾಟಿಸಿದರು. ಬೈಂದೂರು ವಲಯ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಾಖಾ ಕಾರ್ಯದರ್ಶಿ ಸಂಜೀವ ಕರಡು ವರದಿ ಮಂಡಿಸಿದರು. ನೂತನ ಕಾರ್ಯದರ್ಶಿಯಾಗಿ ಸಂಜೀವ ಮರು ಆಯ್ಕೆಯಾದರು
ಅ.7ರಂದು ನಡೆಯುವ ಗುಲ್ವಾಡಿ ಸ್ಥಳೀಯ ಸಮಿತಿ ಸಮ್ಮೇಳನಕ್ಕೆ ಪ್ರತಿನಿಧಿ ಆಯ್ಕೆ ಮಾಡಲಾಯಿತು. ಬೈಂದೂರು ವಲಯ ಸಮ್ಮೇಳನ ಹಾಗೂ ಜಿಲ್ಲಾ ಸಮ್ಮೇಳನ ಯಶಸ್ಸಿಗೆ ತೀರ್ಮಾನ ಮಾಡಲಾಯಿತು.ಸಮ್ಮೇಳನದ ಅಧ್ಯಕ್ಷತೆ ಯನ್ನು ಪುಟ್ಟಯ್ಯ ವಹಿಸಿದ್ದರು. ಅಣ್ಣಪ್ಪ ಅಬ್ಬಿಗುಡ್ಡಿ ವಂದಿಸಿದರು.
Next Story