ಬೆಂಗಳೂರು - ಮುರ್ಡೇಶ್ವರ ರೈಲಿನ ಬೋಗಿಗಳ ಪರಿಷ್ಕರಣೆ
ಉಡುಪಿ: ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಹಾಗೂ ಮುರ್ಡೇಶ್ವರ ನಡುವೆ ಸಂಚರಿಸುವ ದೈನಂದಿನ ಎಕ್ಸ್ಪ್ರೆಸ್ ರೈಲಿನ ಬೋಗಿಗಳನ್ನು ಪರಿಷ್ಕರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಮುಂದಿನ ನವೆಂಬರ್ ಒಂದರಿಂದ ರೈಲಿನ ೨ಟಯರ್ ಎಸಿ ಕೋಚ್ನ್ನು ಒಂದು ಹೆಚ್ಚಿಸಿದರೆ, ಸ್ಲೀಪರ್ ಕೋಚ್ನ್ನು ಒಂದು ಕಡಿಮೆ ಮಾಡಲಾಗುವುದು. ಹೀಗಾಗಿ ರೈಲು ಹಿಂದಿನಂತೆ ೨೨ ಕೋಚ್ಗಳನ್ನೇ ಹೊಂದಿರುತ್ತದೆ.
ಮುಂದಿನ ನವೆಂಬರ್ನಿಂದ ಒಂದಿದ್ದ ೨ಟಯರ್ ಕೋಚ್ ಎರಡಾದರೆ, ೧೧ ಇದ್ದ ಸ್ಲೀಪರ್ ಕೋಚ್ ೧೦ಕ್ಕಿಳಿಯಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ಯಲ್ಲಿ ತಿಳಿಸಿದೆ.
Next Story