ಹೊರದೇಶದಲ್ಲಿ ಕಾರ್ಯನಿರ್ವಹಿಸಿದ್ದ ಇಂಜಿನಿಯರ್, ಪದವೀಧರ ಅಸಹಾಯಕ ಸ್ಥಿತಿಯಲ್ಲಿ ಆಶ್ರಮ ದಾಖಲು
ಉಡುಪಿ, ಅ.15: ಅಮೆರಿಕಾ, ಜರ್ಮನಿ ದೇಶಗಳಲ್ಲಿ ಕೆಲಸ ಮಾಡಿ, ಇದೀಗ ಅಸಹಾಯಕ ಸ್ಥಿತಿಯಲ್ಲಿದ್ದ ಇಂಜಿನಿಯರ್ ಪದವೀಧರರೊಬ್ಬರನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.
ಹೊರದೇಶಗಳಲ್ಲಿ ಕೆಲಸ ಮಾಡಿ 10ಕ್ಕೂ ಹೆಚ್ಚು ಭಾಷೆಗಳನ್ನು ಕರಗತ ಮಾಡಿಕೊಂಡ ಶಿರಸಿ ಮೂಲದ ರಮೇಶ್ ಪಾಡು ರಂಗ ಪಾವಸ್ವರ(65) ಎಂಬವರು ಇದೀಗ ಅಸಹಾಯಕರಾಗಿದ್ದಾರೆ. ಈ ಬಗ್ಗೆ ವಿಶು ಶೆಟ್ಟಿ ವಿನಂತಿ ಮೇರೆಗೆ ಇವರಿಗೆ ಹೊಸ ಬೆಳಕು ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾಗಿದೆ. ತನ್ನ ಸಹೋದರಿ ವೈದ್ಯೆಯಾಗಿ ಸೇವೆ ಮಾಡುತ್ತಿರುವುದಾಗಿ ನೊಂದ ವ್ಯಕ್ತಿ ಮಾಹಿತಿ ನೀಡಿದ್ದಾರೆ.
ಕೌಟುಂಬಿಕ ಕಲಹದಿಂದಾಗಿ ಒಂಟಿಯಾಗಿ ಎಲ್ಲವನ್ನು ಕಳೆದುಕೊಂಡು ಆಶ್ರಯ ಇಲ್ಲದೆ ಇವರಿಗೆ ಈ ಪರಿಸ್ಥಿತಿ ಬಂದಿದೆ ಎನ್ನಲಾಗಿದೆ. ಸಂಬಂಧಿಕರು ಹೊಸಬೆಳಕು ಆಶ್ರಮ ಸಂಪರ್ಕಿಸಬಹುದು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ರಾಮದಾಸ್ ಉದ್ಯಾವರ ಸಹಕರಿಸಿದರು.
Next Story