Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಎಲ್ಲಿ ಅನ್ಯಾಯವಾಗುತ್ತೆ ಅಲ್ಲಿ ತಮಟೆ...

ಎಲ್ಲಿ ಅನ್ಯಾಯವಾಗುತ್ತೆ ಅಲ್ಲಿ ತಮಟೆ ನುಡಿಸುತ್ತೇನೆ : ಭರತ್ ಡಿಂಗ್ರಿ

ಮಾಳಿಂಗರಾಯ ಕೆಂಭಾವಿಮಾಳಿಂಗರಾಯ ಕೆಂಭಾವಿ21 April 2025 4:43 PM IST
share
ಎಲ್ಲಿ ಅನ್ಯಾಯವಾಗುತ್ತೆ ಅಲ್ಲಿ ತಮಟೆ ನುಡಿಸುತ್ತೇನೆ : ಭರತ್ ಡಿಂಗ್ರಿ

ಸಂದರ್ಶನ: ಮಾಳಿಂಗರಾಯ ಕೆಂಭಾವಿ

ಬೆಂಗಳೂರು : ತಮಟೆಗೂ ದಲಿತ ಚಳವಳಿಗೂ ದೊಡ್ಡ ಸಂಬಂಧವಿದೆ. ಎಲ್ಲಿ ಅನ್ಯಾಯವಾಗುತ್ತೆ ಅಲ್ಲಿ ನಾನು ತಮಟೆ ನುಡಿಸುತ್ತೇನೆ ಎಂದು ತಮಟೆ ಕಲಾವಿದ ಭರತ್ ಡಿಂಗ್ರಿ ಅಭಿಪ್ರಾಯಪಟ್ಟಿದ್ದಾರೆ.

ತಮಟೆ ಎನ್ನುವುದು ದಲಿತ ಸಮುದಾಯಗಳ ಅಸ್ತಿತ್ವವಾಗಿದೆ. ಅನೇಕ ವರ್ಷಗಳಿಂದ ತಮಟೆಯನ್ನು ನೋಡುವ ಕ್ರಮ ಬದಲಾಗಿಲ್ಲ. ಅದು ಬದಲಾಗಬೇಕು ಎನ್ನುವ ನಿಟ್ಟಿನಲ್ಲಿ ತಮಟೆ ಶಿಬಿರಗಳನ್ನು ಆಯೋಜಿಸಿದ್ದೇನೆ ಎನ್ನವ ವಿಷಯವನ್ನು ವಾರ್ತಾಭಾರತಿಯ ವಿಶೇಷ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವಾ.ಭಾ : ನಿಮಗೆ ತಮಟೆ ನುಡಿಸುವ ಆಸಕ್ತಿ ಬಂದಿರುವುದು ಯಾವಾಗಿನಿಂದ?

ಭರತ್ ಡಿಂಗ್ರಿ : ನಾನು ಚಿಕ್ಕ ವಯಸ್ಸಿನಿಂದಲೇ ನನ್ನ ತಂದೆ ಜೊತೆ ಬೀದಿ ನಾಟಕಕ್ಕೆ ಹೋಗುತ್ತಿದ್ದೆ. ಅಲ್ಲಿಂದಲೇ ನಾನು ತಮಟೆ ನುಡಿಸುವುದನ್ನು ಕಲಿತಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ಶಾಲೆ ಬಿಟ್ಟು ತಮಟೆ ಅಪ್ಪನ ಜತೆ ತಮಟೆ ನುಡಿಸುವ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ, ಶಾಲೆಯಲ್ಲಿಯೇ ಹಾಡು ಹಾಡುತ್ತಾ ತಮಟೆ ನುಡಿಸುತ್ತಿದ್ದೆ.

ವಾ.ತಾ : ತಮಟೆ ನುಡಿಸುವಾಗ ಕೆಲವು ಕಡೆ ಅಸ್ಪಶ್ಯತೆ ನಡೆಯುತ್ತೆ, ಈ ಬಗ್ಗೆ ಹೇಳುವುದಾದರೆ?

ಭರತ್ ಡಿಂಗ್ರಿ : ಹಿಂದೆ ನಮ್ಮ ಊರಿನಲ್ಲಿ ಮೇಲ್ಜಾತಿಯ ಹುಡುಗನಿಗೆ ತಮಟೆ ಕಲಿಸುವಾಗ ಮನೆಯೊಳಗೆ ಹೋಗುತ್ತಿದ್ದೆ. ಒಂದು ದಿನ ಕಲಿಯುವ ಹುಡುಗನ ದೊಡ್ಡಪ್ಪ, ಬೈದು ಮನೆಯಿಂದ ಹೊರಗೆ ಕಳುಹಿಸಿದ್ದ. ಆವಾಗ ನನಗೆ ಏನು ಗೊತ್ತಿರಲಿಲ್ಲ. ಮೂರ್ನಾಲ್ಕು ವರ್ಷವಾದ ಮೇಲೆ ನನಗೆ ಅದು ಅಸ್ಪಶ್ಯತೆ ಎನ್ನುವುದು ಗೊತ್ತಾಯಿತು. ಅವರೇ ನನ್ನನ್ನು ಕರೆಸಿಕೊಂಡಿದ್ದರು. ಜಾತಿ ಕಾರಣಕ್ಕೆ ಹೊರಗೆ ಹಾಕಿದ್ದರು.

ವಾ.ಭಾ : ನೀವು ತಮಟೆ ಶಿಬಿರಗಳನ್ನು ಮಾಡುತ್ತಿರುವ ಉದ್ದೇಶವೇನು?.

ಭರತ್ ಡಿಂಗ್ರಿ : ತಮಟೆ ಎನ್ನುವುದು ಅಸ್ಪೃಶ್ಯತೆಯ ವಾದ್ಯ ಅಲ್ಲ. ಅದು ಈಗಾಗಲೇ ಮುಖ್ಯವಾಹಿನಿಯಲ್ಲಿದೆ. ಅದನ್ನು ನೋಡುವ ದೃಷ್ಠಿಕೋನ ಸರಿಯಿಲ್ಲ. ಅದು ಕೇವಲ ಒಂದು ಸಮುದಾಯ ಮಾತ್ರ ನುಡಿಸಬೇಕು. ಅದನ್ನು (ಕೆಲಸ) ಚಾಕರಿ ಮಾಡಲು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ತಮಟೆ ಒಂದು ಸಮುದಾಯದ ಅಸ್ತಿತ್ವವಾಗಿದೆ. ಆ ಅಸ್ತಿತ್ವ ಮರೆಯಾಗುತ್ತಿದೆ. ಮೆರವಣಿಗೆ, ಮತ್ತಿತರರ ಕಾರ್ಯಕ್ರಮಕ್ಕೆ ಮಾತ್ರ ತಮಟೆಯನ್ನು ಬಳಸಿಕೊಳ್ಳುತ್ತಿದ್ದಾರೆ. ತಮಟೆಯನ್ನು ಒಳಗೆ ನುಡಿಸಲು ಬಿಡುವುದಿಲ್ಲ. ಹೊರಗಡೆಯೇ ನುಡಿಸಬೇಕಿದೆ. ತಬಲ, ವೀಣೆ, ಮೃದಂಗ ಇತ್ಯಾದಿಗಳನ್ನು ಒಳಗಡೆಯೇ ನುಡಿಸುತ್ತಾರೆ. ಅವರಿಗಾಗಿ ಪ್ರೇಕ್ಷಕರೇ ಕಾಯುತ್ತಿರುತ್ತಾರೆ.

ಆದರೆ ತಮಟೆ ನುಡಿಸುವವರು ಹೊರಗಡೆ ಕಾಯಬೇಕಿದೆ. ಈ ಪದ್ಧತಿ ಬದಲಾಗಬೇಕಿದೆ. ಯಾವುದೇ ವ್ಯಕ್ತಿ ತಮಟೆ ನುಡಿಸುತ್ತಾರೆ ಎಂದರೆ ಅವರಿಗೆ ಅದರ ಇತಿಹಾಸ ಗೊತ್ತಿರಬೇಕು. ಚರ್ಮದ ಜತೆ ಕೆಲಸ ಮಾಡುವುದು, ಚರ್ಮವನ್ನು ಹದ ಮಾಡಿ ತಮಟೆ ತಯಾರಿಸುವುದು ಎಲ್ಲವೂ ದೊಡ್ಡ ಜ್ಞಾನವಾಗಿದೆ. ಅದು ಇಂದಿನ ತಲೆಮಾರಿಗೆ ತಿಳಿಸಿಕೊಡುವುದೇ ನನ್ನ ಉದ್ದೇಶ.

ವಾ.ಭಾ : ತಮಟೆ ಒಂದು ಚಳವಳಿಯನ್ನಾಗಿ ನೀವು ಯಾವ ರೀತಿ ನೋಡುತ್ತೀರಿ?

ಭರತ್ ಡಿಂಗ್ರಿ : ಹಿಂದೆ ದಲಿತರಿಗೆ ಮಾತನಾಡುವ ಅವಕಾಶವೇ ಇರಲಿಲ್ಲ. ಆದ್ದರಿಂದ ಚಳವಳಿ ಆರಂಭವಾಗಿದ್ದೆ ತಮಟೆಯಿಂದ, ತನ್ನ ನೋವನ್ನು ತಮಟೆ ನುಡಿಸುವ ಮೂಲಕ ಹೊರಗೆ ಹಾಕುತ್ತಿದ್ದರು. ಎಲ್ಲಿ ಅನ್ಯಾಯವಾಗುತ್ತೋ ಅಲ್ಲಿ ನಾನು ತಮಟೆ ನುಡಿಸುತ್ತೇನೆ. ತಮಟೆ ನುಡಿಸುವ ಮೂಲಕ ಧ್ವನಿ ಎತ್ತುತ್ತೇನೆ.

ಎ.24ರಿಂದ ತಮಟೆ ಶಿಬಿರ :

ಹಲ್ಗಿ ಕಲ್ಚರ್ ಹಾಗೂ ಸಂವಿಧಾನ ಸಾಥಿ ಸಹಯೋಗದೊಂದಿಗೆ ಎ.24ರಿಂದ 27ರವರೆಗೆ ನಗರದ ಬಂಜಾರಪಾಳ್ಯದಲ್ಲಿರುವ ಸಂವಾದ-ಬದುಕು ಕ್ಯಾಂಪಸ್‌ನಲ್ಲಿ ತಮಟೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇದ್ದವರು, 7829060263, 7259607639ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ತಮಟೆ ಅಸ್ಪಶ್ಯ ವಾದ್ಯ ಅಲ್ಲ. ಅದನ್ನು ಕೆಳಮಟ್ಟದಲ್ಲೇ ನೋಡಲಾಗುತ್ತಿದೆ. ಅದರಲ್ಲಿಯೂ ನಾದ ಇದೆ. ಕೇವಲ ಮನರಂಜನೆಯ ನಾದ ನೋಡಲಾಗುತ್ತಿದೆ. ತಮಟೆಯದು ಒಂದು ಸಮುದಾಯದ ನೋವಿನ ನಾದ ಎನ್ನುವುದನ್ನು ತಮಟೆ ಶಿಬಿರದ ಮೂಲಕ ತಿಳಿಸಿಕೊಡುತ್ತೇನೆ.

-ಭರತ್ ಡಿಂಗ್ರಿ, ತಮಟೆ ಕಲಾವಿದ

share
ಮಾಳಿಂಗರಾಯ ಕೆಂಭಾವಿ
ಮಾಳಿಂಗರಾಯ ಕೆಂಭಾವಿ
Next Story
X