ಬದಿಯಡ್ಕ : ಖಿದ್ಮತ್ತುಲ್ ಇಸ್ಲಾಂ ಸಾಧು ಸಂರಕ್ಷಣಾ ಸಮಿತಿಯ 2ನೇ ವಾರ್ಷಿಕೋತ್ಸವ
ಬದಿಯಡ್ಕ: ಖಿದ್ಮತ್ತುಲ್ ಇಸ್ಲಾಂ ಸಾಧು ಸಂರಕ್ಷಣಾ ಸಮಿತಿಯ 2ನೇ ವಾರ್ಷಿಕೋತ್ಸವದ ಅಂಗವಾಗಿ ಮತ ಪ್ರವಚನ ಮತ್ತು ಸಾಂಸ್ಕ್ರತಿಕ ಸಮಾವೇಶ 2016ರ ಜನವರಿ 24,25,26,27ರಂದು ಮರ್ಹೂಂ ಝೈನುಲ್ ಉಲಮ ಚೆರುಶ್ಯೇರಿ ಝೈನುದ್ಧೀನ್ ಮುಸ್ಲಿಯಾರ್ ನಗರ ಪಂಜಿಕ್ಕಲ್ನಲ್ಲಿ ನಡೆಯಲಿದೆ.
24ರಂದು ಖಾಸಿ ತ್ವಾಖ ಆಹಮ್ಮದ್ ಮೌಲವಿ ಆಲ್-ಅಸ್ಹರಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಬಳಿಕ ಶೌಕತ್ತಲಿ ಮೌಲವಿ ವೆಳ್ಳಮುಂಡ ಇವರಿಂದ ಮತ ಪ್ರವಚನ ನಡೆಯಲಿದೆ.
25ರಂದು ಪಾಣಕ್ಕಾಡ್ ಸಯ್ಯಿದ್ ಅಬ್ಬಾಸಲಿ ಶಿಹಾಬ್ ತಂಙಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಹಮ್ಮದ್ ಸಖಾಫಿ, ಪಾತೂರು ಇವರಿಂದ ಭಾಷಣ ನಡೆಯಲಿದೆ. ಜಬ್ಬಾರ್ ಮಸ್ತಾನ್ ಉಪ್ಪಾಪ ಸಮೂಹ ಪ್ರಾರ್ಥನೆ ನೆರವೇರಿಸುವರು.
26ರಂದು ಶನಿವಾರ ಸಂಜೆ ಸಾಂಸ್ಕ್ರತಿಕ ಸಮಾವೇಶ ನಡೆಯಲಿದೆ.ಅಂದು ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ಆರೋಗ್ಯ ಸಚಿವ ಯು.ಟಿ ಖಾದರ್ ಉದ್ಘಾಟಿಸುವರು. ಕರ್ನಾಟಕ ಅರಣ್ಯ ಇಲಾಖೆ ಸಚಿವ ರಮನಾಥ ರೈ ಮುಖ್ಯ ಅತಿಥಿಯಾಗಿರುವರು. ಮಾಹಿನ್ ಕೇಳೋಟ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಅಬ್ದುಲ್ ರಜಾಕ್, ಕಾಸರಗೋಡು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ,ಜಿ.ಸಿ ಬಶೀರ್, ಮಾಜಿ ರಾಜ್ಯ ಸಚಿವ ಸಿ.ಟಿ ಆಹಮ್ಮದಾಲಿ ಮೊದಲಾದವರು ಉಪಸ್ಥಿತರಿರುವರು.