ಮಂಜೇಶ್ವರ : ಕೊಲೆ ಪ್ರಕರಣದ ಆರೋಪಿ ನಾಪತ್ತೆ

Update: 2016-03-22 12:18 GMT

ಮಂಜೇಶ್ವರ ;ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಯುವಕನೊಬ್ಬ ನಾಪತ್ತೆಯಾದ ಘಟನೆ ಬಗ್ಗೆ ದೂರು ನೀಡಲಾಗಿದೆ.

    ಬಂದ್ಯೋಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಸದ್ದು ಯಾನೆ ಆಸೀರ್(26)ನಾಪತ್ತೆಗೊಂಡ ಆರೋಪಿ. ವಾರಗಳ ಹಿಂದೆ ಬೆಳಗ್ಗೆ ಕೆಲಸಕ್ಕೆಂದು ತೆರಳಿದ ಈತ ಮರಳಿ ಬಂದಿಲ್ಲ ಎಂದು ದೂರಲಾಗಿದೆ. ಮೊಬೈಲ್ ಸ್ವಿಚ್ ಆಫ್‌ಗೊಂಡಿದೆ ಎಂದು ಆತನ ತಂದೆ ಪೋಲಿಸರಿಗೆ ದೂರು ನೀಡಿದ್ದಾರೆ. ಇದರಂತೆ ಪೋಲಿಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

  ಈತನ ನಾಲ್ಕು ವರ್ಷಗಳ ಹಿಂದೆ ಪೇರಾಲ್ ನಿವಾಸಿ ಶಫೀಕ್ ಎಂಬವರನ್ನು ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಕೊಲೆ ನಡೆಸಿ ಬಳಿಕ ಮೃತದೇಹವನ್ನು ಮರಳಿನೊಳಗೆ ಹೂತು ಹಾಕಲಾಗಿತ್ತು. ಈ ಪ್ರಕರಣದಲ್ಲಿ ಸೆರೆಗೀಡಾದ ಆಸೀರ್ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News