ಕಿನ್ನಿಗೋಳಿ: ಕಾಳಿಕಾಂಭ ಮಹಿಳಾ ವೃಂದದ ವತಿಯಿಂದ ನಡೆದ ಮಹಿಳಾ ದಿನಾಚರಣೆ
ಕಿನ್ನಿಗೋಳಿ, ಮಾ.22: ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ , ಹೆಚ್ಚಿನ ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಇಂದು ಬೇರೆ ಬೇರೆ ಕ್ಷೇತ್ರದಲ್ಲಿ ಮಹಿಳೆಯರಿಗೆ ಮೀಸಲಾತಿ ಇದ್ದು ಅದನ್ನು ಸದುಪಯೋಗಪಡಿಸಿಕೊಳ್ಲಬೇಕು ಎಂದು ಸಾಹಿತಿ, ಶಿಕ್ಷಕಿ ಕೊಡೆತ್ತೂರು ಗಾಯತ್ರಿ ಉಡುಪ ಹೇಳಿದರು.
ಅವರು ಕಿನ್ನಿಗೋಳಿಯ ಸರಪ್ ಅಣ್ಣಯ್ಯ ಆಚಾರ್ ಸಭಾಭವನದಲ್ಲಿ ಕಾಳಿಕಾಂಭ ಮಹಿಳಾ ವೃಂದದ ವತಿಯಿಂದ ನಡೆದ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಕಮ್ಮಾರಿಕೆ ವೃತ್ತಿಯ ಸಾಧಕಿ ಶೋಭಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಅನಿತಾ ಪ್ರಥ್ವಿರಾಜ್, ರತ್ನಾ ಪ್ರಭಾಕರ್, ಹೇಮಾ ವಿಶ್ವನಾಥ, ಗೀತಾ ಯೋಗೀಶ್, ವಾಣಿ ಗಣೇಶ್, ಶುಭ ಕೇಶವ ಶಶಿಕಲಾ ಯೋಗೀಶ್,ಸುನೀತಾ ದಿನೇಶ್, ಅನಿತಾ ವಿಶ್ವನಾಥ್, ಶಿಲ್ಪಿ ಶಿವಪ್ರಸಾದ್ ಆಚಾರ್ಯ ಪ್ರಥ್ವಿರಾಜ್ ಆಚಾರ್ಯ, ಕೆ.ಬಿ.ಸುರೇಶ್, ದಿನೇಶ್ ಆಚಾರ್ಯ ಮತ್ತಿತರರು ಇದ್ದರು. ಅನಿತಾ ಪ್ರಭಾಕರ್ ಸ್ವಾಗತಿಸಿ ಸವಿತಾ ದಿನೇಶ್ ಧನ್ಯವಾದ ಸಮರ್ಪಿಸಿದರು ವಾಣಿ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.